Get Updates
Get notified of breaking news, exclusive insights, and must-see stories!

ರಾಜ್ಯೋತ್ಸವ: ದೀಪ, ಮೈಕಿಗೆ ಬಾಡಿಗೆ ನೀಡದ ವಾಟಾಳ್‌ ವಿರುದ್ಧ ದೂರು

ಬೆಂಗಳೂರು : ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಧ್ವನಿವರ್ಧಕ ಹಾಗೂ ವಿದ್ಯುತ್‌ ದೀಪಾಲಂಕಾರಗಳನ್ನು ಬಳಸಿಕೊಂಡ ಕನ್ನಡ ಚಳವಳಿಕಾರ ವಾಟಾಳ್‌ ನಾಗರಾಜ್‌ ಅವರು, ಅದರ ಬಾಡಿಗೆಯನ್ನೇ ಕೊಟ್ಟಿಲ್ಲ ಎಂದು ಮಾಗಡಿ ರಸ್ತೆಯ ಜೈ ಹನುಮಾನ್‌ ಲೈಟ್‌ ಅಂಡ್‌ ಸೌಂಡ್‌ ಅಂಗಡಿಯ ಮಾಲಿಕರಾದ ಪಾರ್ವತಮ್ಮ ಅನ್ನುವ ಮಹಿಳೆ ಅಲಸೂರ್‌ ಗೇಟ್‌ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ನಗರದ ಸರ್ಕಾರಿ ಕಲಾ ಕಾಲೇಜಿನ ಮೈದಾನದಲ್ಲಿ 1998- 99 ಮತ್ತು 1999- 2000 ಸಾಲಿನ ರಾಜ್ಯೋತ್ಸವ ಕಾರ್ಯಕ್ರಮಗಳ ಅಂಗವಾಗಿ ನಿರ್ಮಿಸಿದ್ದ ಮಂಟಪಕ್ಕೆ ವಿದ್ಯುತ್‌ ದೀಪದ ಅಲಂಕಾರ ಹಾಗೂ ಧ್ವನಿ ವರ್ಧಕ ವ್ಯವಸ್ಥೆ ಮಾಡಲಾಗಿತ್ತು . ಆದರೆ, ಅದರ ಬಾಡಿಗೆ 62 ಸಾವಿರ ರುಪಾಯಿಗಳನ್ನು ಈವರೆಗೆ ಪಾವತಿಸದೆ ವಾಟಾಳ್‌ ಅವರು ಸತಾಯಿಸುತ್ತಿದ್ದಾರೆ ಎಂದು ಪಾರ್ವತಮ್ಮ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ನವಂಬರ್‌ ತಿಂಗಳು ಪೂರ್ತಿ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಆಚರಿಸುವ ಕೆಲವು ಕನ್ನಡ ಸಂಘಟನೆಗಳು, ಕನ್ನಡದ ಹೆಸರಿನಲ್ಲಿ ರೋಲ್‌ಕಾಲ್‌ ಮಾಡುತ್ತವೆ ಎನ್ನುವ ದೂರು ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾಗುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+