ಟಿಪ್ಪುವಿನ ಮರಿ ಮಗಳಿಗೆ ಬ್ರಿಟನ್ ರಕ್ಷಣಾಸಚಿವಾಲಯದಿಂದ ಗೌರವ
ಲಂಡನ್ : ಬ್ರಿಟಿಷ್ ಗುಪ್ತದಳದಲ್ಲಿ ಮಹತ್ವದ ಸೇವೆ ಸಲ್ಲಿಸಿರುವ ಹಾಗೂ ನಾರಿkುಗಳ ವಿರುದ್ಧ ಕೆಲಸ ಮಾಡಿದ್ದ ಮೈಸೂರು ಹುಲಿ ಟಿಪ್ಪು ಸುಲ್ತಾನನ ಮರಿ ಮೊಮ್ಮಗಳ ಸೇವೆಯನ್ನು ಗೌರವಿಸಲು ಇಲ್ಲಿನ ರಕ್ಷಣಾ ಸಚಿವಾಲಯ ನಿರ್ಧರಿಸಿದೆ. ರಕ್ಷಣಾ ದಳದಲ್ಲಿ ಸುಮಾರು 200 ವರ್ಷಗಳ ಪರಂಪರೆಯಲ್ಲಿ ಅಲ್ಪಸಂಖ್ಯಾತರು ಸಲ್ಲಿಸಿರುವ ಸೇವೆಯನ್ನು ಸ್ಮರಿಸಲು ಏರ್ಪಡಿಸಿರುವ ಪ್ರದರ್ಶನ ಸಂದರ್ಭದಲ್ಲಿ ಈ ಗೌರವವನ್ನು ಸಲ್ಲಿಸಲಾಗುತ್ತದೆ.
ನೂರ್ ಇನಾಯತ್ ಖಾನ್- ಉತ್ತಮ ಸರೋದ್ ವಾದಕಳೂ ಹೌದು. ಹುಟ್ಟಿದ್ದು ಮಾಸ್ಕೋದಲ್ಲಿ . ಶಿಕ್ಷಣ ಪ್ಯಾರಿಸ್ನಲ್ಲಿ . ಈಕೆಗೆ ಮರಣೋತ್ತರವಾಗಿ ಜಾರ್ಜ್ ಕ್ರಾಸ್ ಪ್ರಶಸ್ತಿಯೂ ಸಂದಿದೆ. ಆಕ್ರಮಿತ ಫ್ರಾನ್ಸ್ ಪ್ರದೇಶದಲ್ಲಿ ವಿರೋಧಿಗಳ ವಿರುದ್ಧ ವೈರ್ಲೆಸ್ ಉಪಕರಣವನ್ನು ಬಳಸಿದ್ದು ಅವರ ಸಾಧನೆ.
1940 ರಲ್ಲಿ ಮಹಿಳಾ ಹೆಚ್ಚುವರಿ ವಾಯುದಳಕ್ಕೆ ಸೇರ್ಪಡೆಯಾದ ಖಾನ್, ನಂತರ ಪರಿಣತ ಸಂಕೇತ ವಿಷಯಗಳಲ್ಲಿ ಉನ್ನತ ತರಬೇತಿ ಪಡೆಯಲು ಆಯ್ಕೆಯಾದರು. ತರಬೇತಿಯ ತರುವಾಯ ಫ್ರೆಂಚ್ ಭಾಷೆಯನ್ನು ಉತ್ತಮವಾಗಿ ಬಲ್ಲ ಅವರು ಗುಪ್ತದಳಕ್ಕೆ ಸೇರ್ಪಡೆಯಾದರು. ಸ್ಥಳೀಯ ಸಹಾಯಕ ದಳಗಳೊಂದಿಗೆ ದುಡಿಯಲು 1943 ರಲ್ಲಿ ಅವರನ್ನು ಫ್ರಾನ್ಸ್ಗೆ ವರ್ಗಾಯಿಸಲಾಯಿತು. ಅಲ್ಲಿ ಅವರು ಸಲ್ಲಿಸಿದ ಸೇವೆ ಅತ್ಯಮೂಲ್ಯವಾದುದು.
ಎರಡು ಮಹಾಯುದ್ಧಗಳಲ್ಲಿ ಭಾರತೀಯರು ಭುಜಕ್ಕೆ ಭುಜ ಆನಿಸಿ ಸಲ್ಲಿಸಿದ ಸೇವೆಯನ್ನು ವಿಶೇಷವಾಗಿ ನೂರ್ ಖಾನ್ ಅವರ ಸೇವೆಯನ್ನು ಸ್ಮರಿಸಲಾಗುತ್ತದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಇಂದಿನ 100 ದಶಲಕ್ಷ ಪೌಂಡ್ಗಳಿಗೆ ಸಮನಷ್ಟು ಹಣವನ್ನು ಭಾರತ ದೇಣಿಗೆಯ ರೂಪದಲ್ಲಿ ಒದಗಿಸಿತ್ತು .
ಭಾರತದ ಮಹಾನ್ ಸ್ವಾತಂತ್ರ್ಯ ಪ್ರೇಮಿ ಎಂದು ಹೆಸರಾದ ಟಿಪ್ಪು ಸುಲ್ತಾನನ ಬ್ರಿಟೀಷರ ವಿರುದ್ಧ ಸೆಣಸುತ್ತಲೇ ನಿಧನರಾದದ್ದನ್ನು ಇಲ್ಲಿ ನೆನೆಯಬಹುದು. ಆದರೆ, ಅವರ ವಂಶದ ಹೆಣ್ಣು ಮಗಳು ಅದೇ ಬ್ರಿಟೀಷ್ ಪಡೆಗಳ ಪರವಾಗಿ ದುಡಿದು ಗೌರವ ಗಿಟ್ಟಿಸುತ್ತಿರುವುದು ಅಪರೂಪದ ವಿಷಯವಾಗಿದೆ.
(ಐಎಎನ್ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications