ಚಂದ್ರಗ್ರಹಕ್ಕೆ ಇನ್ನಾರು ವರ್ಷದಲ್ಲಿ ಭಾರತ ವಿಜ್ಞಾನಿಗಳ ಅಭಿಯಾನ
ಬೆಂಗಳೂರು : ಹಿಂದೂಗಳು ದೇವರೆಂದೇ ತಿಳಿದಿರುವ ಚಂದ್ರನಲ್ಲಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯೇ ಅಂತರಿಕ್ಷಯಾನ ಕೈಗೊಳ್ಳುವ ಕನಸು ನನಸಾಗುವ ಕಾಲ ದೂರವೇನಿಲ್ಲ. ಇನ್ನು 6 ವರ್ಷಗಳ ಅವಧಿಯಾಳಗೇ ಇದು ಕೈಗೂಡಬಹುದು ಎಂಬ ಸೂಚನೆಯನ್ನು ಇಸ್ರೋದ ಅಧ್ಯಕ್ಷ ಕೆ. ಕಸ್ತೂರಿರಂಗನ್ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಕಸ್ತೂರಿ ರಂಗನ್, ಆದರೆ ಈ ಅಭಿಯಾನಕ್ಕೆ ನಿರ್ದಿಷ್ಟ ಕಾಲಮಿತಿಯನ್ನೇನೂ ವಿಧಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಇಂತಹ ಕಾರ್ಯಾಚರಣೆಗೆ ಪೂರ್ವ ಯೋಜಿತ ಕಾರ್ಯಕ್ರಮವನ್ನೇ ರೂಪಿಸಬೇಕಾಗುತ್ತದೆ ಎಂದರು.
ಈ ಸಂಬಂಧ ಇಸ್ರೋ ಬಹಳ ಗಂಭೀರ ಚಿಂತನೆಯಲ್ಲಿ ನಿರತವಾಗಿದ್ದು, ಪ್ರಯೋಗಾತ್ಮಕ ಸಲಹೆ ಸೂಚನೆಗಳಿಗಾಗಿ ವೈಜ್ಞಾನಿಕ ಹಾಗೂ ಏರೋನಾಟಿಕಲ್ ಸಮುದಾಯದೊಂದಿಗೆ ಚಿಂತನ ಮಂಥನ ನಡೆಸುತ್ತಿದೆ ಎಂದರು. ಅಲ್ಲದೆ ನೀತಿ ನಿಯಮ ರೂಪಕರ ಸಲಹೆ ಪಡೆದು ಒಟ್ಟಾರೆಯಾಗಿ ಈ ಅಭಿಯಾನದ ಯಶಸ್ಸಿಗೆ ಶ್ರಮಿಸುವುದು ಎಂದರು.
ಕನಸಿನ ಯೋಜನೆಯಲ್ಲ : ಪ್ರಶ್ನೆಯಾಂದಕ್ಕೆ ಉತ್ತರಿಸಿದ ಅವರು, ಇದೇನು ಕೇವಲ ಕನಸಿನ ಯೋಜನೆಯಲ್ಲ . ಈ ಅಭಿಯಾನದಿಂದ ಹೆಚ್ಚಿನದನ್ನು ಸಾಧಿಸುವ ಉದ್ದೇಶವಿದೆ ಎಂದರು. ಜಿ.ಎಸ್.ಎಲ್.ವಿ. ಉಡಾವಣೆಯ ಕಾರ್ಯ ಸಂಪೂರ್ಣ ಯಶಸ್ಸಿನ ಪಥದಲ್ಲಿದ್ದು, ಉಡಾವಣೆಯ ಕಾಲವನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದರು. ಮುಂದಿನ ವರ್ಷ ಫೆಬ್ರುವರಿ ಮಧ್ಯ ಭಾಗದಲ್ಲಿ ಈ ಉಪಗ್ರಹ ಉಡಾವಣೆ ಆಗಲಿದೆ ಎಂದೂ ಅವರು ಹೇಳಿದರು. (ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications