ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಾದ್ಯಂತ ಕಲಾಗ್ಯಾಲರಿ: ಎಸ್‌.ಜಿ. ವಾಸುದೇವ್‌ ನೇತೃತ್ವದಲ್ಲಿ ಸಮಿತಿ

By Staff
|
Google Oneindia Kannada News

ಬೆಂಗಳೂರು : ರಾಜ್ಯಾದ್ಯಂತ ಕಲಾ ಗ್ಯಾಲರಿಗಳನ್ನು ಸ್ಥಾಪಿಸಲು ಮೈಸೂರು ಸೇಲ್ಸ್‌ ಇಂಟರ್‌ ನ್ಯಾಷನಲ್‌ ಲಿಮಿಟೆಡ್‌ ಯೋಜಿಸಿದ್ದು, ಇದಕ್ಕಾಗಿ ಕಲಾವಿದ ಎಸ್‌. ಜಿ. ವಾಸುದೇವ್‌ ಅವರ ನೇತ ೃತ್ವದಲ್ಲಿ ಸಮಿತಿಯಾಂದನ್ನು ರಚಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಐ.ಎಂ. ವಿಠ್ಠಲ ಮೂರ್ತಿ ಹೇಳಿದ್ದಾರೆ.

ಈ ಸಮಿತಿಯು ಮುಂದಿನ ತಿಂಗಳು 4ರಿಂದ 9ರವರೆಗೆ ಚಿಕ್ಕ ಮಗಳೂರಿನಲ್ಲಿ ಅಖಿಲ ಭಾರತ ಕಲಾವಿದರ ಶಿಬಿರವನ್ನು ಆಯೋಜಿಸಿದ್ದು, ದೇಶದ ಒಂಭತ್ತು ಮಂದಿ ಪ್ರಸಿದ್ಧ ಕಲಾವಿದರು ಮತ್ತು ರಾಜ್ಯದ ಆರು ಮಂದಿ ಕಲಾವಿದರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ರಾಜ್ಯದ 11 ಕಲಾ ಶಾಲೆಗಳಿಂದ ಆಯ್ಕೆ ಮಾಡಲಾದ ತಲಾ ಇಬ್ಬರು ಹಿರಿಯ ವಿದ್ಯಾರ್ಥಿಗಳು ಶಿಬಿರದಲ್ಲಿ ವಿಚಾರ ವಿನಿಮಯ ನಡೆಸಲಿದ್ದಾರೆ ಎಂದು ಮೂರ್ತಿ ಹೇಳಿದರು.

ಮೈಸೂರು, ಗುಲ್ಬರ್ಗಾ ಮತ್ತಿತರ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಲಾ ಶಿಬಿರಗಳನ್ನು ನಡೆಸಲು ಸಂಸ್ಥೆ ಉದ್ದೇಶಿಸಿದೆ. ಚಿಕ್ಕ ಮಗಳೂರಿನ ಶಿಬಿರವನ್ನು ಸಾಹಿತಿ ಪೂರ್ಣ ಚಂದ್ರ ತೇಜಸ್ವಿ ಡಿ. 4 ರಂದು ಉದ್ಘಾಟಿಸುವರು. ದೆಹಲಿಯ ಮನುಪಾರೀಖ್‌ ಮತ್ತು ಮಾಧವಿ ಪಾರೀಖ್‌, ಮುಂಬೈನ ಪ್ರಭಾಕರ್‌ ಕೊಲ್ವೆ ಮತ್ತು ರೇಖಾ ರಾವ್‌, ಕಲ್ಕತ್ತಾದ ಅಶೋಕ ಭೌಮಿಕ್‌, ಹೈದರಾ ಬಾದಿನ ಸೂರ್ಯ ಪ್ರಕಾಶ್‌ , ಬರೋಡದ ಸುರೇಂದ್ರ ನಾಯರ್‌ ಮತ್ತಿತರ ಪ್ರಸಿದ್ಧ ಕಲಾವಿದರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಒಂದು ವಾರದವರೆಗೆ ನಡೆವ ಶಿಬಿರದ ಕೊನೆಯಲ್ಲಿ ಕಲಾವಿದರ ಕಲಾ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X