Get Updates
Get notified of breaking news, exclusive insights, and must-see stories!

ಪ್ರಾದೇಶಿಕ ಸಮತೋಲನಕ್ಕೆ ಅತಿ ಶೀಘ್ರದಲ್ಲೇಸಾಂಸ್ಕೃತಿಕ ನೀತಿ ಜಾರಿ

ಗುಲ್ಬರ್ಗಾ : ಪ್ರಾದೇಶಿಕ ಸಮತೋಲನ ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಹಾಗೂ ಸರಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸಾಂಸ್ಕೃತಿಕ ನೀತಿಯಾಂದನ್ನು ಶೀಘ್ರವೇ ಜಾರಿಗೆ ತರಲು ಸರಕಾರ ನಿರ್ಧರಿಸಿದೆ. ಈ ವಿಷಯವನ್ನು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್‌ ತಿಳಿಸಿದ್ದಾರೆ.

ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ನಗರಕ್ಕೆ ಬಂದಿರುವ ಸಚಿವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಔಪಚಾರಿಕವಾಗಿ ಮಾತನಾಡುತ್ತಾ ಈ ವಿಷಯ ತಿಳಿಸಿದರು. ಹೊಸ ಸಾಂಸ್ಕೃತಿಕ ನೀತಿಯ ಜಾರಿಗೆ ಈಗಾಗಲೇ ಸದನದಲ್ಲಿ ಹಾಗೂ ವಿವಿಧ ಇಲಾಖೆಗಳ ಹಾಗೂ ಪ್ರಾಧಿಕಾರಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿರುವುದಾಗಿ ತಿಳಿಸಿದರು.

ಚಿಂತಕರ ಚಾವಡಿ : ಹೊಸ ನೀತಿಯ ಸಾಧಕ - ಭಾದಕಗಳ ಬಗ್ಗೆ ಚಿಂತಿನ - ಮಂಥನ ನಡೆಸಲು ಚಿಂತಕರ ಚಾವಡಿ ರಚಿಸಲಾಗಿದೆ ಎಂದೂ ತಿಳಿಸಿದರು. ಯುವಜನರನ್ನು ಪ್ರೋತ್ಸಾಹಿಸುವ ಸಲುವಾಗಿ ಯುವಪ್ರಶಸ್ತಿ ಹಾಗೂ ಕಿಶೋರ ಪ್ರಶಸ್ತಿಗಳನ್ನು ಕೂಡ ಸಂಸ್ಕೃತಿ ಇಲಾಖೆ ಅನುಷ್ಠಾನಕ್ಕೆ ತರಲಿದೆ ಎಂದರು.

ಜಿಲ್ಲಾ ಉತ್ಸವ : ಕರ್ನಾಟಕದ ಎಲ್ಲ ಜಿಲ್ಲೆಗಳ ಇತಿಹಾಸ ಹಾಗೂ ಪರಂಪರೆಯನ್ನು ಬಿಂಬಿಸುವ ಶೀರ್ಷಿಕೆಗಳನ್ನೊಳಗೊಂಡ ಜಿಲ್ಲಾ ಉತ್ಸವಗಳನ್ನು ನಡೆಸುವ ಉದ್ದೇಶ ಸರಕಾರಕ್ಕಿದೆ. ಇದಕ್ಕಾಗಿ ಈಗಾಗಲೇ ಸಲಕ ಸಿದ್ಧತೆಗಳೂ ನಡೆಯುತ್ತಿವೆ. ಜಿಲ್ಲಾಧಿಕಾರಿಗಳೊಂದಿಗೂ ಈ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದ ಅವರು, ಪ್ರತಿ ಜಿಲ್ಲೆಗೂ ಉತ್ಸವಕ್ಕಾಗಿ 50 ಸಾವಿರ ರುಪಾಯಿ ಮಂಜೂರು ಮಾಡಲಾಗುವುದು ಎಂದೂ ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+