ನಾರಾಯಣ ಮೂರ್ತಿ, ಪ್ರೇಮ್ಜಿ ಅವರಿಗೆ ವಿಶೇಷಪೊಲೀಸ್ ರಕ್ಷಣೆ
ಇಮ್ರಾನ್ ಖುರೇಷಿ
ಬೆಂಗಳೂರು : ಭಾರತದ ಐಟಿ ದಿಗ್ಗಜರಾದ ಬೆಂಗಳೂರು ನಿವಾಸಿಗಳಾಗಿರುವ ವಿಪ್ರೋದ ಅಜೀಮ್ ಪ್ರೇಮ್ಜೀ ಮತ್ತು ಇನ್ಫೋಸಿಸ್ನ ನಾರಾಯಣ ಮೂರ್ತಿ ಅವರುಗಳಿಗೆ Z ಕೆಟಗರಿ ಪೊಲೀಸ್ ರಕ್ಷಣೆಯನ್ನು ಒದಗಿಸಲಾಗಿದೆ.
ರಾಜ್ ಕುಮಾರ್ನ್ನು ವೀರಪ್ಪನ್ ಅಪಹರಿಸಿ, ಬಿಡುಗಡೆ ಮಾಡಿಯಾಯಿತು. ಮತ್ತೊಮ್ಮೆ ಇಂತಹ ಯಾವುದೇ ವೀರಪ್ಪನ್ಗಳ ಅಪಹರಣ ಬಲೆಗೆ ರಾಜ್ಯದ ಗಣ್ಯ ವ್ಯಕ್ತಿಗಳು ಬೀಳಬಾರದು ಎಂಬ ಮುಂದಾಲೋಚನೆಯ ಮಿಂಚು ಹೊಳೆದು ರಾಜ್ಯ ಸರಕಾರ ಈ ಆದೇಶ ಹೊರಡಿಸಿದೆ. ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ನೇತೃತ್ವದ ಸಮಿತಿಯ ಸಲಹೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿರುವ ಕೆಲವು ಗಣ್ಯ ವ್ಯಕ್ತಿಗಳಿಗೆ ರಕ್ಷಣೆ ಒದಗಿಸುವ ಅಗತ್ಯ ಅಂತಹ ಅಸಾಮಾನ್ಯ ವಿಷಯ ವೇನಲ್ಲ ಎಂದು ರಕ್ಷಣಾ ವಿಭಾಗದ ಹಿರಿಯ ಅಧಿಕಾರಿಗಳು ಐಎಎನ್ಎಸ್ ಜೊತೆ ಮಾತನಾಡುತ್ತಾ ಹೇಳುತ್ತಾರೆ.
ರಾಜ್ ಕುಮಾರ್ ಅಪಹರಣ ವಾದ ಕೆಲವು ದಿನಗಳಲ್ಲಿಯೇ ಬೆದರಿಕೆ ಕರೆಗಳ ಕುರಿತು ಅಧ್ಯಯನ ನಡೆದಿದ್ದು, ಪ್ರೇಮ್ಜಿ ಮತ್ತು ನಾರಾಯಣ ಮೂರ್ತಿ ಅವರಿಗೆ ಬೆದರಿಕೆ ಕರೆಗಳೇನಾದರೂ ಬಂದಿತ್ತೇ ಎಂಬ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಿಲ್ಲ.
ತಮಗೆ ಸರಕಾರ ರಕ್ಷಣೆ ಒದಗಿಸಿರುವ ಕುರಿತು ಯಾವುದೇ ವಿವರಣೆ ನೀಡಲು ಪ್ರೇಮ್ಜಿ ಮತ್ತು ಮೂರ್ತಿ ನಿರಾಕರಿಸಿದ್ದಾರೆ. ಸರಕಾರದ ಈ ಕ್ರಮವು ನಾಸ್ದಾಕ್, ಭಾರತೀಯ ಶೇರು ಮಾರುಕಟ್ಟೆ ಮತ್ತು ನ್ಯೂಯಾರ್ಕ್ ಶೇರು ವಿನಿಮಯ ಕೇಂದ್ರದ ವಲಯಗಳಲ್ಲಿ ಭಾರೀ ಸುದ್ದಿಯನ್ನೇ ಮಾಡಿದೆ. ಅದೇನೇ ಇರಲಿ, ಸಿಲಿಕಾನ್ ವ್ಯಾಲಿಯ ಈ ಇಬ್ಬರು ದೊರೆಗಳು ಎಂದಿನಂತೆ ಆರಾಮವಾಗಿ ಇದ್ದಾರೆ. ಮಧ್ಯಮ ವರ್ಗದ ಜನರಂತೆಯೇ ವಾಣಿಜ್ಯ ನಗರಗಳ ವ್ಯಸ್ತ ರಸ್ತೆಗಳನ್ನು ಅವರು ದಾಟುತ್ತಾರೆ ’ ಎಂದು ಸೆಕ್ಯುರಿಟಿ ಅಧಿಕಾರಿಗಳು ಹೇಳುತ್ತಾರೆ.
ಐಟಿ ದಿಗ್ಗಜರ ಅಪಹರಣವಾಗಿದ್ದರೆ !
ಪ್ರೇಮ್ಜೀ ಭಾರತದ ಶ್ರೀಮಂತ ವ್ಯಕ್ತಿ ಎಂದು ಗುರುತಿಸಲ್ಪಟ್ಟರೂ ಕೂಡ ಸಾಮಾನ್ಯ ಮನುಷ್ಯರಂತೆಯೇ ಜೀವನ ನಡೆಸುತ್ತಿರುವ ವ್ಯಕ್ತಿ . ಯಾಕೆಂದರೆ ಸಿರಿವಂತಿಕೆ ಒಂದು ರಾಷ್ಟ್ರೀಯ ಮೌಲ್ಯ, ನಾನು ಕೆಲವೇ ಶೇರುಗಳನ್ನು ಮಾರಿದರೂ ನನ್ನ ಸಿರಿವಂತಿಕೆ ಎಲ್ಲ ಈ ಕ್ಷಣದಲ್ಲಿಯೇ ಹೋಗಿಬಿಡುತ್ತದೆ ಎಂದು ಪ್ರೇಮ್ಜಿ ಕೆಲವು ತಿಂಗಳ ಹಿಂದೆ ಹೇಳಿದ್ದರು. ನಮ್ಮ ನಿಮ್ಮ ಮತ್ತು ಸಮಾಜದ ದೃಷ್ಟಿಯಲ್ಲಿ ಪ್ರೇಮ್ಜಿ ಮತ್ತು ನಾರಾಯಣ ಮೂರ್ತಿ ನ್ಯಾಷನಲ್ ವ್ಯಾಲ್ಯೂ ಉಳ್ಳವರು. ಆದರೆ, ಅಪಹರಣಕಾರರಿಗೆ ಅದೆಲ್ಲಾ ಅರ್ಥವಾಗುವುದಿಲ್ಲ , ಅವರು ಅಪಹರಿಸುತ್ತಾರೆ, ನಂತರ ಬೇಡಿಕೆಗಳ ಕ್ಯಾಸೆಟ್ ಕಳುಹಿಸುತ್ತಾರೆ ಅಷ್ಟೇ. ರಾಜ್ಕುಮಾರ್ ಅಪಹರಣವಾದಂತೆ ಈ ಐಟಿ ದಿಗ್ಗಜರೇನಾದರೂ ಅಪಹರಣಗೊಂಡಿದ್ದಲ್ಲಿ ಶೇರುಮಾರುಕಟ್ಟೆಯ ಗತಿಯೇನಾಗುತ್ತಿತ್ತು ? ಯೋಚಿಸಿ, ಪೊಲೀಸ್ ಅಧಿಕಾರಿಯಾಬ್ಬರು ಹಾಗಾಗಲಿಲ್ಲವಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ.
ದೇಶದ ಪ್ರತಿಷ್ಠಿತ ವ್ಯಕ್ತಿಗಳು ಬೆಂಗಳೂರಿನಲ್ಲಿದ್ದಾರೆ ಎನ್ನುವ ಹೆಮ್ಮೆಗೆ ಮಸಿಯಾಗದ ಹಾಗೆ ಸರಕಾರ ಕೈಗೊಂಡಿರುವ ಈ ಕ್ರಮ , ರಾಜ್ ಅಪಹರಣದಿಂದ ಕಲಿತ ಪಾಠವಾಗಿರಬಹುದು. ಅಥವಾ ಸುಪ್ರೀಂ ಕೋರ್ಟ್ನ ಛೀಮಾರಿಯ ಬಿಸಿಯ ಫಲವಾಗಿರಲೂ ಬಹುದು. ಅಪಹರಣ, ಬೆದರಿಕೆಗಳಂತಹ ಸಾಮಾಜಿಕ ಅನಿಷ್ಟಗಳ ತಾಯಿ ಬೇರನ್ನು ಕಿತ್ತೆಸೆಯುವ ಯಾವುದೇ ಕ್ರಮವಾಗಲಿ , ಸ್ವಾಗತಾರ್ಹ.
(ಐಎಎನ್ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications