ಮೌನದ ಹೆಜ್ಜೆ ಜಾಡಲ್ಲಿ ಎತ್ತಿನ ಗಾಡಿಯಾಟ
ಮಳೆಗಾಲ ಮುಗಿದು ತಿಂಗಳೊಂದು ಕಳೆದ ನಂತರ ಅತಿವೃಷ್ಟಿ ಪರಿಹಾರದ ಮಾತುಕತೆಗಳು ಕೇಳಿಬರುತ್ತಿದ್ದು , ಆದಷ್ಟು ಹೆಚ್ಚು ಹಣ ಗಿಟ್ಟಿಸಿಕೊಳ್ಳಲು ವಿಧಾನ ಸಭೆಯಲ್ಲಿ ಗಲಾಟೆ ನಡೆಯುತ್ತಿದೆ. ನಡುವೆ ರಾಜ್ ಕುಮಾರ್ ಬಂದು, ಸಂಭ್ರಮ ಶುಭಾಶಯಗಳ ಸಾಲುಗಳು ತೇಲಿದವು. ಮತ್ತೆ ವೀರಪ್ಪನ್ನ್ನು ಹಿಡಿಯಿರಿ ಎಂದು ಕೆಲವರು ತಮ್ಮ ಬತ್ತಳಿಕೆಯ ರಾಕೆಟ್ ಎಸೆದರು. ಆದರೂ ಪರಿಹಾರದ ನೂಲು ಹಿಡಿದು ಜಗ್ಗುವುದು ಮರೆಯಾಗಿಲ್ಲ. ಯಾಕೆಂದರೆ ಕಾಸು ಕೈಗೆ ಬರುವುದು ಇದೇ ವಿಷಯದಲ್ಲಿ .
ಎಲ್ಲಿ ಮನೆ ಕಳೆದುಕೊಂಡವರು ಹಣ ಪಡೆಯುತ್ತಾರೋ... ಮತ್ತೆ ಕಡಲ ಅಲೆಗಳ ಅಬ್ಬರದಲ್ಲಿ ಕರಗಿರುವ ಗೋಡೆಗಳಿಗೆ ಬಲ ನೀಡುವ ಕಾರ್ಯ ಶುರುವಾಗುತ್ತದೋ... ಮತ್ತೆ ಯಾರಿಗೆ ಪುನರ್ವಸತಿ ಬ್ಯಾನರ್ ಕೆಳಗೆ ಸುಣ್ಣದ ಹೊಸ ಮನೆ ಸಿಗುತ್ತದೋ... ಅಂತೆಲ್ಲ ಗೊತ್ತಾಗುವುದು ಈ ಕಲಾಪಗಳು ಮುಗಿದು ದುಡ್ಡಿಗಾಗಿ ಸಂತ್ರಸ್ತರು ಗ್ರಾಮ ಪಂಚಾಯತ್ಗೆ ಓಡಾಡಿದಾಗ.
ಕಳೆದರೆಡು ದಿನಗಳ ನಂತರ ರಾಜ್ ಕುಮಾರ್ ಆಗಮನದ ಖುಷಿಯೀಗ ಜೋರು ಮಳೆ ನಂತರದ ಅರ್ಥಪೂರ್ಣ ನಿಶ್ಯಬ್ದದಂತಿದೆ. ಗದ್ದಲಕ್ಕಿಂತ ಮೌನವಾಗಿ ಅನುಭವಿಸುವುದೇ ಹೆಚ್ಚು ಖುಷಿ ಎಂದು ಕನ್ನಡಿಗರು ತಿಳಿದಿರಬೇಕು. ಈ ಮೌನದ ಸಂವಹನಕ್ಕೆ ರಾಜ್ಯದ ತಣ್ಣನೆ ಗಾಳಿಯ ಹವೆಯೂ ಕೈ ಗೂಡಿಸಿದೆ. ಬೆಳಗಾವಿಯಲ್ಲಿ ಕನಿಷ್ಠ ತಾಪಮಾನ 15.4 ಡಿ.ಸೆಂ. ಅಷ್ಟಿತ್ತು . ಅದು ರಾಜ್ಯದ ಮಟ್ಟಿಗೆ ಕನಿಷ್ಠ ತಾಪಮಾನ. ಕರಾವಳಿ ಹಾಗೂ ಒಳನಾಡುಗಳಲ್ಲೂ ಉಷ್ಣತೆ ಕುಸಿದಿತ್ತು . ತಣ್ಣನೆಯ ಮಂದ ಗಾಳಿ. ಗಂಟಲಿನಲ್ಲಿ ಕೆರೆತ ತರುವಂಥಾ ಥಂಡಿ.
ಮುಂದಿನ ಎರಡು ದಿನಗಳಲ್ಲೂ ಬಿಸಿಲು- ಮಳೆಯ ಎತ್ತಿನ ಗಾಡಿಯ ಆಟ ಮುಂದುವರಿಯುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚದುರಿದಂತೆ ದಕ್ಷಿಣ ಒಳನಾಡಿನಲ್ಲಿ ತುಂತುರು ಉದುರಿದರೂ ಉದುರಬಹುದು. ಉಳಿದಂತೆ ಒಣಹವೆ. ವಾರದ ರಜೆ ಮಜವಾಗಿ ಕಳೆಯಲು ಹೇಳಿ ಮಾಡಿಸಿದ ಕಾಲ. ನೀವು ಪುರುಸೊತ್ತಿಲ್ಲದ ಜನವಾದರೆ.. ಸಾರಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications