ರಣಜಿ: ಕೆಚ್ಚಿನ ಆಟವಾಡಿದ ಕರ್ನಾಟಕಕ್ಕೆ ಆಂಧ್ರ ವಿರುದ್ಧ ನಿಚ್ಚಳ ಗೆಲುವು
ಬೆಳಗಾವಿ : ಸೋತರೆ ನಾಕೌಟ್ ಹಾದಿ ದೂರವಾಗುತ್ತದೆ ಅನ್ನುವುದನ್ನು ಅರಿತಂತೆ ಕೆಚ್ಚಿನಿಂದ ಆಡಿದ ಕರ್ನಾಟಕ ತಂಡ, ಆಂಧ್ರದ ವಿರುದ್ಧ 5 ವಿಕೆಟ್ಗಳ ನಿಚ್ಚಳ ಗೆಲುವು ಸಾಧಿಸಿ ಪಣಕ್ಕಿದ್ದ ಎಲ್ಲಾ 8 ಪಾಯಿಂಟುಗಳನ್ನು ಗಳಿಸಿದೆ. ಇದರೊಂದಿಗೆ ರಾಜ್ಯ ತಂಡ ಈವರೆಗಿನ 3 ಪಂದ್ಯಗಳಿಂದ 16 ಪಾಯಿಂಟು ಸಂಪಾದಿಸಿದೆ.
ಎರಡನೆ ದಿನದ ಕೊನೆಗೆ 8 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದ್ದ ಆಂಧ್ರ ತಂಡ, ಶುಕ್ರವಾರದ ಆಟದಲ್ಲಿ ಗಳಿಸಿದ್ದು 17 ರನ್ ಮಾತ್ರ. ಮೊದಲ ಇನಿಂಗ್ಸ್ ಮುನ್ನಡೆಯೂ ಸೇರಿದಂತೆ ಎದುರಾಳಿಗಳ ತಂಡ ಒಡ್ಡಿದ 263 ರನ್ಗಳ ಗುರಿಯನ್ನು ಬೆನ್ನತ್ತಿದ ಕರ್ನಾಟಕ 265 ರನ್ಗಳನ್ನು ಗಳಿಸಿ ಗೆಲುವಿನ ನಗೆಯಾಡಿತು. ರಾಜ್ಯದ ಗೆಲುವಿನಲ್ಲಿ ತಂಡದ ನಾಯಕ ಜೆ. ಅರುಣ್ಕುಮಾರ್ ಅವರ 82 ರನ್ಗಳು ಪ್ರಮುಖ ಪಾತ್ರ ವಹಿಸಿದವು. ಅರುಣ್ ಅವರ ಸ್ಕೋರ್ನಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ಗಳಿದ್ದವು.
ಸುಜಿತ್ ಸೋಮಸುಂದರ್ (36) ವರ ಜೊತೆಯಲ್ಲಿ 78 ರನ್ಗಳ ಹಾಗೂ ತಿಲಕ್ ನಾಯ್ಡು (ಔಟಾಗದೆ 71) ಅವರೊಂದಿಗಿನ 62 ರನ್ಗಳ ಎರಡು ಉತ್ತಮ ಜೊತೆಯಾಟದಲ್ಲಿ ಅರುಣ್ ಪಾಲ್ಗೊಂಡರು. ಈ ಉತ್ತಮ ಜೊತೆಯಾಟಗಳಿಂದಾಗಿ ರಾಜ್ಯ ತಂಡದ ಜಯ ಇನ್ನೂ ಒಂದು ದಿನ ಇರುವಂತೆ ಶುಕ್ರವಾರವೇ ಸಾಧ್ಯವಾಯಿತು. ಉತ್ತಮವಾಗಿ ಬ್ಯಾಟ್ ಬೀಸಿದ ದೊಡ್ಡ ಗಣೇಶ್ 6 ಬೌಂಡರಿಗಳಿದ್ದ 30 ರನ್ ಗಳಿಸಿ ತಿಲಕ್ ನಾಯ್ಡು ಅವರೊಂದಿಗೆ ಔಟಾಗದೆ ಉಳಿದರು. ಆಂಧ್ರದ ಪರ ರಂಗನಾಥ್ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರೆ, ಶಹಾಬುದ್ದೀನ್ ಮತ್ತು ವಾಟೇಕರ್ ತಲಾ 1 ವಿಕೆಟ್ ಗಳಿಸಿದರು.
(ಯುಎನ್ಐ)
ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications