ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವಸಂದ್ರ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

By Staff
|
Google Oneindia Kannada News

ಬೆಂಗಳೂರು : ಕೆ.ಆರ್‌.ಪುರಂ ಬಳಿಯ ದೇವಸಂದ್ರ ಕೆರೆಯಲ್ಲಿ ಈಜಾಡಲು ಹೋಗಿದ್ದ ಬಾಲಕರಿಬ್ಬರು ಕೆರೆಯಲ್ಲಿ ಮುಳುಗಿ ಅಸು ನೀಗಿದ ಘಟನೆ ಗುರು-ವಾ-ರ ನಡೆ-ದಿ-ದೆ.

ಜೆ.ಸಿ. ಲೇಔಟ್‌ನ ಗಜೇಂದ್ರ ಎಂಬವರ ಮಗ ಮುರಳೀಧರ(10) ಮತ್ತು ಶಂಕರ್‌ ಎಂಬವರ ಮಗ ಪ್ರಕಾಶ್‌(11) ಮೃತರಾದವರು ಎಂದು ಗುರುತಿಸಲಾಗಿದೆ. ಗುರುವಾರ ಮಧ್ಯಾಹ್ನದ ಹೊತ್ತಿಗೆ ಈಜಾಡಲು ಕೆರೆಗೆ ಇಳಿದಾಗ ಈ ಆನಾಹುತ ನಡೆದಿದ್ದು ಕೆ.ಆರ್‌ ಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ. ಮಡಿಯಾಳ್‌ ಹೇಳಿದ್ದಾರೆ.

ಇಬ್ಬರೂ ಹುಡುಗರು ಕೆ.ಆರ್‌ ಪುರದ ಲಿಟಲ್‌ ಬ್ಲೂಮ್‌ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದರು. ಪ್ರಕಾಶ್‌ನ ಶವ ದೊರೆತಿದ್ದು, ಗಜೇಂದ್ರನ ಶವಕ್ಕಾಗಿ ಪತ್ತೆ ಕಾರ್ಯ ನಡೆದಿದೆ. ಕೆರೆಯಲ್ಲಿ ತುಂಬಾ ಹೂಳು ತುಂಬಿರುವುದರಿಂದ ಶವ ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ ಎಂದು ವರದಿಯಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X