ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಷರತ್ತಿನ ಮೇಲೆ ರಾಜ್ ಬಿಡುಗಡೆ - ಕರುಣಾನಿಧಿ
ಚನ್ನೈ: ಕೆಲವು ಬೇಡಿಕೆಗಳನ್ನು ಈಡೇರಿಸುವುದಾಗಿ ತಮಿಳು ರಾಷ್ಟ್ರೀಯ ಆಂದೋಲನದ ನಾಯಕ ಪಿ. ನೆಡುಮಾರನ್ ಭರವಸೆ ಕೊಟ್ಟ ಮೇಲೆ, ವೀರಪ್ಪನ್, ರಾಜ್ಕುಮಾರ್ ಅವರನ್ನು ಬಿಡುಗಡೆ ಮಾಡಿದ್ದಾನೆ ಎಂದು ತಮಿಳುನಾಡು ಮಖ್ಯಮಂತ್ರಿ ಎಂ. ಕರುಣಾನಿಧಿ ಶುಕ್ರವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ವೀರಪ್ಪನ್ ವಿರುದ್ದ ಮುಂದಿನ ಕಾರ್ಯಾಚರಣೆ ಏನು ಎಂಬ ಪ್ರಶ್ನೆಗೆ ಉತ್ತರಿಸಲಿಲ್ಲ. ರಾಜ್ ಅವರು ಬಿಡುಗಡೆಗೊಂಡು ಬೆಂಗಳೂರಿನತ್ತ ತೆರಳಿದ ನಂತರ ಈರೋಡ್ನಿಂದ ಬಂದ ನೆಡುಮಾರನ್ ಮತ್ತು ರಾಜ್ಯ ಸರಕಾರಗಳ ಅಧಿಕೃತ ಸಂಧಾನಕಾರ ಪಿ. ನೆಡುಮಾರನ್ ಅವರ ಜೊತೆ ನಡೆಸಿದ ಸಭೆಯ ವಿವರ ನೀಡಲು ಕರುಣಾನಿಧಿ ನಿರಾಕರಿಸಿದರು.
ರಾಜ್ಕುಮಾರ್ ತಮ್ಮನ್ನು ನೋಡಲು ಚೆನ್ನೈಗೆ ಬರುತ್ತಾರೆಯೇ? ಎಂಬ ಪ್ರಶ್ನೆ ಗೆ, ಬರುತ್ತಾರೆ ಆದರೆ ಯಾವಾಗ ಬರುತ್ತಾರೆ ಎಂದು ತಿಳಿದಿಲ್ಲ ಎಂದು ಕರಣಾನಿಧಿ ಉತ್ತರಿಸಿದರು.
ಮುಖಪುಟ / ರಾಜ್ ಬಿಡುಗಡೆ
Comments
Story first published: Friday, November 17, 2000, 5:30 [IST]