ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್‌ ವಿರುದ್ಧ ಕೇಂದ್ರ ಸರ್ಕಾರದ ಕಾರ್ಯಾಚರಣೆ - ವೆಂಕಯ್ಯ ನಾಯ್ಡು

By Staff
|
Google Oneindia Kannada News

ಚೆನ್ನೈ : ಸಂಧಾನಕಾರರೊಂದಿಗೆ ರಾಜ್‌ಕುಮಾರ್‌ ನಾಡಿಗೆ ಮರಳುತ್ತಿದ್ದಂತೆ ವೀರಪ್ಪನ್‌ ವಿರುದ್ಧ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಮಂತ್ರಾಲೋಚನೆ ನಡೆಸುವುದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ರಾಜ್‌ಕುಮಾರ್‌ ಅಪಹರಣ ಪ್ರಕರಣದ ಬಗ್ಗೆ ಈವರೆಗೆ ಯಾವುದೇ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸದೆ ಮೌನವಾಗಿದ್ದ ಕೇಂದ್ರ ಸರ್ಕಾರ, ಕಾಡುಗಳ್ಳನ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿರುವುದು ವೆಂಕಯ್ಯ ನಾಯ್ಡು ಅವರ ಮಾತಿನಿಂದ ಸ್ಪಷ್ಟವಾಗಿದೆ. ಆದರೆ, ಕಾರ್ಯಾಚರಣೆ ಬಗೆಗಿನ ವಿವರಗಳನ್ನು ಅವರು ಬಹಿರಂಗಪಡಿಸಲಿಲ್ಲ . ರಾಜ್‌ ಬಿಡುಗಡೆಯ ನಂತರ ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.

ನಮ್ಮೆದುರೀಗ ಎರಡು ಶುಭ ಸುದ್ದಿಗಳಿವೆ. ಒಂದು ರಾಜ್‌ ಅವರ ಬಿಡುಗಡೆ, ಮತ್ತೊಂದು ಮುರಸೋಳಿ ಮಾರನ್‌ ಅವರ ಆರೋಗ್ಯ ಸುಧಾರಣೆ ಎಂದು ನಾಯ್ಡು ಹೇಳಿದರು.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X