ಪಟೇಲ್ ಉಡಾಫೆಯೇ ರಾಜ್ ಅಪಹರಣಕ್ಕೆ ಕಾರಣ- ಕರುಣಾನಿಧಿ ಬಾಂಬ್
ಚೆನ್ನೈ : ನೆಡುಮಾರನ್ ನೇತೃತ್ವದ ಸಂಧಾನಕಾರರ ತಂಡ ಕಾಡಿನಲ್ಲಿರುವಾಗಲೇ, ರಾಜ್ ಅಪಹರಣಕ್ಕೆ ಕರ್ನಾಟಕ ಸರ್ಕಾರವೇ ಕಾರಣ ಎನ್ನುವ ಟೀಕಾ ಬಾಂಬನ್ನು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಸಿಡಿಸಿದ್ದಾರೆ.
ಟಾಡಾ ಅನ್ವಯ ಬಂಧಿಸಲಾಗಿರುವ ಕೆಲವು ನಿರ್ದೋಷಿ ತಮಿಳರನ್ನು ಬಿಡುಗಡೆ ಮಾಡುವಂತೆ ಪದೇ ಪದೇ ಕರ್ನಾಟಕ ಸರ್ಕಾರವನ್ನು ಕೇಳಿಕೊಂಡರೂ ಅದನ್ನು ಈಡೇರಿಸಲಿಲ್ಲವಾದ್ದರಿಂದಲೇ ರಾಜ್ಕುಮಾರ್ ಅಪಹರಣವಾಗಿದೆ ಎಂದು ಕರುಣಾನಿಧಿ ಹೇಳಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ನಡೆದ ಮುಂದೂಲ್ಪಟ್ಟಿದ್ದ ರಾಜ್ ಅಪಹರಣ ಪ್ರಕರಣದ ಚರ್ಚೆಯ ವೇಳೆಯಲ್ಲಿ ಅವರು ಈ ವಿಷಯ ತಿಳಿಸಿದರು. 1997ರಲ್ಲಿ ಜೆ.ಎಚ್.ಪಟೇಲರು ಕರ್ನಾಟಕದ ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕದ ಜೈಲಿನಲ್ಲಿರುವ ನಿರ್ದೋಷಿ ತಮಿಳರನ್ನು ಬಿಡುವಂತೆ ಕೋರಿದ್ದೆ. ಅವರು ಕೂಡ ಅದಕ್ಕೆ ಒಪ್ಪಿದ್ದರು. ಆದರೆ ಹೇಳಿದಂತೆ ನಡೆಯಲಿಲ್ಲ. ಈ ವಿಷಯವನ್ನು ಪದೇ ಪದೇ ಅವರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಲಿಲ್ಲ ಎಂದರು.
ಈವತ್ತು ವೀರಪ್ಪನ್ ಟಾಡಾ ಬಂದಿಗಳ ಬಿಡುಗಡೆಗೆ ಪಟ್ಟು ಹಿಡಿದು ಕೂತಿದ್ದಾನೆ. ಈ ಹಿಂದೆಯೇ ನನ್ನ ಮಾತನ್ನು ಕರ್ನಾಟಕ ಸರ್ಕಾರ ಕೇಳಿದ್ದರೆ ಹೀಗಾಗುತ್ತಿರಲಿಲ್ಲ. ರಾಜ್ ಅಪಹರಣಕ್ಕೆ ಕರ್ನಾಟಕವೇ ಕಾರಣ. ಸರ್ಕಾರ ಸಂಧಾನಕ್ಕೆ ಕಳುಹಿಸಿರುವ ತಮಿಳು ರಾಷ್ಟ್ರೀಯ ಚಳವಳಿ (ಟಿಎನ್ಎಂ) ನಾಯಕ ಪಿ.ನೆಡುಮಾರನ್ ಅದಕ್ಕೆ ಅರ್ಹ ವ್ಯಕ್ತಿ. ಅವರ ಪಕ್ಷವನ್ನೂ ನಿಷೇಧಿಸಿಲ್ಲವಾದ್ದರಿಂದ ದೂತರನ್ನಾಗಿ ಅವರನ್ನು ಕುಹಿಸಿರುವುದರಲ್ಲಿ ತಪ್ಪೇನೂ ಇಲ್ಲವೆಂದು ತಿಳಿಸಿದರು.
ಬೆಂಗಳೂರು ವರದಿ : ಉಡುಪಿಯಲ್ಲಿ ಕನಕ ಜಯಂತಿ ಉತ್ಸವ ಉದ್ಘಾಟಿಸಿ ಬೆಂಗಳೂರಿಗೆ ಹಿಂತಿರುಗಿದ ಕೇಂದ್ರ ಗೃಹ ಸಚಿವ ಎಲ್.ಕೆ. ಅಡ್ವಾಣಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ರಾಜ್ ತ್ವರಿತ ಬಿಡುಗಡೆಗಾಗಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಜೊತೆ ಚರ್ಚಿಸುವುದಾಗಿ ಭರವಸೆ ಕೊಟ್ಟರು.
ಬೆಂಗಳೂರಲ್ಲಿ ಕೇಳಿದ್ದು : ಕರುಣಾನಿಧಿಯವರ ಈ ಹೇಳಿಕೆ ಕಿವಿ ಮೇಲೆ ಬೀಳುತ್ತಲೇ ರಾಜ್ ಅಪಹರಣದ ಮೊದಲೊಂದು ತಿಂಗಳು ಕೇಳಿಬರುತ್ತಿದ್ದ ‘ಈ ಕೆಲಸ ಮಾಡಿಸಿರೋದು ಕರುಣಾನಿಧೀನೆ’ ಎಂಬಂತಹ ಕನ್ನಡಿಗರ ಮಾತುಗಳು ಮತ್ತೆ ಗಾಳಿಯಲ್ಲಿ ತೇಲುತ್ತಿವೆ.
(ಯುಎನ್ಐ)
ವಾರ್ತಾ ಸಂಚಯ
ಮುಖಪುಟ / ರಾಜ್ ಅಪಹರಣ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications