ವೀರಪ್ಪನ್ ಸಂಪರ್ಕ ಸಾಧಿಸಿದ್ದಾರಂತೆ ಪಿ. ನೆಡುಮಾರನ್
ಚೆನ್ನೈ: ಅಪಹರಣ ಪ್ರಕರಣ 107ನೇ ದಿನಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಆರನೇ ಸಂಧಾನಯಾತ್ರೆ ಆರಂಭಿಸಿರುವ ಪ್ರಮುಖ ಸಂಧಾನಕಾರರಾದ ತಮಿಳು ರಾಷ್ಟ್ರೀಯ ಆಂದೋಲನದ ನಾಯಕ ಪಿ. ನೆಡುಮಾರನ್ ಅವರು ವೀರಪ್ಪನ್ ಸಂಪರ್ಕ ಸಾಧಿಸಿದ್ದಾರೆ.
ಶನಿವಾರ ಸಂಜೆ ತಮ್ಮ ಅನುಯಾಯಿಯಾಬ್ಬರೊಂದಿಗೆ ಸತ್ಯಮಂಗಲಂ ಕಾಡಿನಲ್ಲಿನಲ್ಲಿ ತಂಗಿದ್ದ ನೆಡುಮಾರನ್ ಬೆಳಗಿನ ಜಾವ ಕಾಡಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಟಾಟಾ ಸುಮೊ ಒಂದರಲ್ಲಿ ಬಣ್ಣಾರಿ ಅರಣ್ಯಪ್ರದೇಶದ ಮೂಲಕವೇ ತೆರಳಿದ ಅವರು, ಭವಾನಿ ಸಾಗರಕ್ಕೆ ಹೋಗುವ ದಾರಿಯಲ್ಲಿ ಕೊತ್ತಮಂಗಲಮ್ ಬಳಿಯ ತೀರ್ ಕಡವು ಎಂಬಲ್ಲಿಂದ ಮೋಟಾರ್ ಬೈಕ್ ಒಂದರಲ್ಲಿ ಅರಣ್ಯದತ್ತ ತೆರಳಿದರು. ಅಲ್ಲಿ ವೀರಪ್ಪನ್ ಸಹಚರರ ಸಂಪರ್ಕ ಲಭ್ಯವಾಗಿದೆ ಎಂದು ತಿಳಿದು ಬಂದಿದೆ.
ಭಾನುವಾರ ಮಧ್ಯಾಹ್ನದಿಂದಲೇ ಸಂಧಾನ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ. ನೆಡುಮಾರನ್ ಅವರ ಜೊತೆ ಮಾನವ ಹಕ್ಕುಗಳ ಕಾರ್ಯಕರ್ತರಾದ ಪ್ರೊ. ಕಲ್ಯಾಣಿ ಮತ್ತು ಪಿ. ಸುಕುಮಾರನ್ ಸಹ ಹೋಗಿದ್ದಾರೆ. ಎರಡು ರಾಜ್ಯಗಳ ಅಧಿಕೃತ ಸಂಧಾನಕಾರರಾದ ಗೋಪಾಲ್ ಹೊರಡುವುದು ವಿಳಂಬವಾಗಿದ್ದು, ವೀರಪ್ಪನ್ನಿಂದ ಸಂದೇಶ ಬಂದ ನಂತರ ಇತರ ಸಂಧಾನಕಾರರನ್ನು ಕೂಡಿಕೊಳ್ಳುವರೆಂದು ನಕ್ಕಿರನ್ ಸಹಸಂಪಾದಕ ಕಾಮರಾಜ್ ಹೇಳಿದ್ದಾರೆ.
ವಾರ್ತಾ
ಸಂಚಯ
ಮುಖಪುಟ
/
ರಾಜ್
ಅಪಹರಣ