ಇನ್ಸಾಟ್-2ಬಿ ಮತ್ತೆ ವೈಫಲ್ಯ, ಇಂಧನ ಮುಗಿದಿರಬಹುದೆಂಬ ಶಂಕೆ
ಬೆಂಗಳೂರು : ಭೂಮಿಯ ಸಂಪರ್ಕವನ್ನೇ ಕಳೆದುಕೊಂಡಿದ್ದ ಉಪಗ್ರಹದ ಮೇಲೆ ಹಾಸನದ ಇಸ್ರೋ ವಿಜ್ಞಾನಿಗಳು ನಿಯಂತ್ರಣ ಸಾಧಿಸಿದ್ದ ಸಂತಸ ಕೇವಲ 12 ಗಂಟೆಗಳಲ್ಲೇ ಇಲ್ಲವಾದಂತಾಗಿದೆ. ಶನಿವಾರ ಸಂಜೆ ನಿಯಂತ್ರಣಕ್ಕೆ ಸಿಕ್ಕಿದ್ದ ಇನ್ಸಾಟ್- 2ಬಿ ಉಪಗ್ರಹ, ಭಾನುವಾರ ಬೆಳಿಗ್ಗೆ ಮತ್ತೆ ಭೂ ಸಂಪರ್ಕ ಕಳೆದುಕೊಂಡಿರುವುದಾಗಿ ಇಸ್ರೋ ಮೂಲಗಳು ತಿಳಿಸಿವೆ. ಉಪಗ್ರಹವನ್ನು ಮರಳಿ ಭೂ ಸಂಪರ್ಕಕ್ಕೆ ತರಲು ವಿಜ್ಞಾನಿಗಳು ಅವಿರತ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.
ಭೂ ಸಂಪ-ರ್ಕ ಕಳೆ-ದು-ಕೊಂ-ಡಿ-ದ್ದ ಇ-ನ್ಸಾ-ಟ್- 2ಬಿ ಉಪ-ಗ್ರ-ಹ-ವ-ನ್ನು ಮತ್ತೆ ಭೂ ನಿಯಂತ್ರಣ ಕಕ್ಷೆಯ ನಿಯಂತ್ರಣಕ್ಕೆ ತರುವಲ್ಲಿ ಶನಿ-ವಾ-ರ ಸಂಜೆ- ಇಸ್ರೋದ ವಿಜ್ಞಾನಿಗಳು ಯಶಸ್ವಿಯಾಗಿದ್ದ ರಾದರೂ ದುರಸ್ಥಿಗೊಂಡ ಉಪಗ್ರಹ ಮತ್ತೆ ಕೆಲವೇ ಗಂಟೆಗಳಲ್ಲಿ ಭೂ ಸಂಪರ್ಕವನ್ನು ಕಳೆದುಕೊಂಡಿತು. ಮುಂದಿನ 24 ಗಂಟೆಗಳ ಕಾಲ ಹಗಲಿರುಳು ದುರಸ್ಥಿ ಕಾರ್ಯ ಮುಂದುವರಿಯುವುದು ಎಂದು ಇಸ್ರೋ ಮೂಲಗಳು ತಿಳಿಸಿವೆ.
ಚಲ-ನ ನಿಯಂ-ತ್ರ-ಣ-ಕ್ಕೆ ಅಗ-ತ್ಯ-ವಿ-ರು-ವ ನೌಕೆ-ಯ-ಲ್ಲಿ ನ ಆಕ್ಸಿ-ಡೈ-ಸ-ರ್ ಖರ್ಚಾಗಿರುವ ಶಂಕೆ ಇದ್ದು ಉಪಗ್ರಹ ಪುನ-ಶ್ಚೇ-ತ-ನ-ದ ಪ್ರಯ-ತ್ನ-ಗಳು ತಡವಾ-ಗುತ್ತಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬಾನುಲಿ ಹಾಗೂ ದೂರದರ್ಶನದ ಸೇವೆಗಳಿಗೆ ತೊಂದರೆಯಾಗದಂತೆ ಇನ್ಸಾಟ್- 2ಬಿ ಟ್ರಾನ್ಸ್ಪಾಂಡರ್ಗಳು ನಿರ್ವಹಿಸುತ್ತಿದ್ದ ಸೇವೆಗಳನ್ನು ಇನ್ಸಾಟ್ ಸರಣಿಯ ಇತರ ಉಪಗ್ರಹಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂಧನ ಖರ್ಚಾಗಿರುವುದು ನಿಜವೇ ಆದಲ್ಲಿ ಇನ್ಸಾಟ್ 2 ಬಿಯನ್ನು ನಿಗದಿತ ನಿಯಂತ್ರಣ ಕಕ್ಷೆಗೆ ತರುವುದು ಕಷ್ಟ ಸಾಧ್ಯ ಎಂದೂ ಮೂಲಗಳು ತಿಳಿಸಿವೆ.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications