ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾನಪದ ಅಕಾಡಮಿಯಿಂದ 500 ಮಂದಿ ಕಲಾವಿದರ ಆತ್ಮಕಥೆ ಪ್ರಕಟಣೆ

By Staff
|
Google Oneindia Kannada News

ಶಿವಮೊಗ್ಗಾ : ರಾಜ್ಯದ ಸುಮಾರು 500 ಮಂದಿ ಜನಪದ ಕಲಾವಿದರ ಆತ್ಮ ಕಥೆ ಪ್ರಕಟಣೆಯ ಯೋಜನೆಯನ್ನು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಮ್ಮಿಕೊಂಡಿದೆ ಎಂದು ಅಕಾಡೆಮಿಯ ಅಧ್ಯಕ್ಷ ಕಾಳೇಗೌಡ ನಾಗವಾರ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಕನ್ನಡ ಜಾನಪದ ಲೋಕಕ್ಕೆ ಸಮೃದ್ಧ ಕೊಡುಗೆ ನೀಡಿದ ಹಿರಿಯ ವ್ಯಕ್ತಿಗಳ ಕಲೆ, ಅನುಭವ, ನೆನಪುಗಳನ್ನು ಸಂಗ್ರಹಿಸಲಾಗುವುದು. ಜನಪದ ಕಲಾವಿದರನೇಕರಿಗೆ ಅಕ್ಷರ ಗೊತ್ತಿಲ್ಲದಿರುವುದರಿಂದ ಅವರ ಆತ್ಮ ಕಥೆಗಳನ್ನು ನುರಿತ ವಿದ್ವಾಂಸರಿಂದ ಬರೆಸಲಾಗುವುದು. ಅಂತಹ ವಿದ್ವಾಂಸರಿಗೆ ಆತ್ಮ ಕಥೆ ಬರೆಯುವ ಕುರಿತು ನವೆಂಬರ್‌ 3 ಮತ್ತು 4ರಂದು ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಕಾಳೇಗೌಡ ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X