ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೃಂಗೇರಿ-ಚಿಕ್ಕಮಗಳೂರು ರಸ್ತೆಗೆ ಹೊಸ ಬಣ್ಣ

By Staff
|
Google Oneindia Kannada News

ಚಿಕ್ಕಮಗಳೂರು : ಚಿಕ್ಕಮಗಳೂರು-ಶೃಂಗೇರಿ ನಡುವಿನ ಹೈವೇಯ ಅಭಿವೃದ್ಧಿಗೆ ರಾಜ್ಯ ಸರಕಾರವು 25 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಕರ್ನಾಟಕ ರಸ್ತೆ ಅಭಿವೃದ್ಧಿ ಆಯೋಗ ಕಾಮಗಾರಿಯನ್ನು ಕೈಗೆತ್ತಿ ಕೊಳ್ಳಲಿದೆ.

87 ಕಿ.ಮೀ ಉದ್ದದ ಹೈವೇ ಅಭಿವೃದ್ಧಿ ಯೋಜನೆಯ ಜೊತೆಗೆ ಜಿಲ್ಲೆಯಲ್ಲಿ ಬಿಗಡಾಯಿಸಿರುವ ಎಲ್ಲ ರಸ್ತೆಗಳನ್ನು ಸರಿಪಡಿಸುವ ಕಾರ್ಯವನ್ನು ಆಯೋಗ ಆರಂಭಿಸಲಿದೆ. ಈ ಯೋಜನೆ ಮುಕ್ತಾಯವಾದಲ್ಲಿ , ಶೃಂಗೇರಿ ಪ್ರವಾಸಿಗರು ಬೇಲೂರು, ಹಳೇಬೀಡು ನೋಡಲಿಚ್ಚಿಸಿದಲ್ಲಿ ತಮ್ಮ ವಾಹನವನ್ನು ಚಿಕ್ಕಮಗಳೂರಿನತ್ತ ನಿರಾಳವಾಗಿ ತಿರುಗಿಸಬಹುದು.

ಬಾಬಾ ಬುಡನಗಿರಿ ಬೆಟ್ಟದ ತುದಿಗೆ ರಸ್ತೆ ನಿರ್ಮಿಸುವ ಯೋಜನೆಯೂ ಜಿಲ್ಲಾಡಳಿತಕ್ಕಿದೆ. ಕೆಮ್ಮಣ್ಣು ಗುಂಡಿಯಲ್ಲಿ ನಿರ್ಮಿಸಲಾದ ಪ್ರವಾಸೀ ವಸತಿಗೃಹವನ್ನು ಮುಂದಿನ ತಿಂಗಳಲ್ಲಿ ಉದ್ಘಾಟಿಸಲಾಗುವುದು. ಇದರಿಂದ ಪ್ರವಾಸೀ ಕ್ಷೇತ್ರದಲ್ಲಿ ಚಿಕ್ಕಮಗಳೂರು ಹಿಂದೆ ಬೀಳುವುದು ತಪ್ಪುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಇಂಜಿನಿಯರ್‌ ಚಿನ್ನಪ್ಪ ನಾಯಕ್‌ ಹೇಳುತ್ತಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X