ಅರಸುಗಳಿಗಿದು ವೀರ, ಕರ್ನಾಟಕ ಪರಿಣಿತರ ಅಲಂಕಾರ !!
ಬೆಂಗಳೂರು : ಇದು 25 ವರ್ಷಗಳ ಹಿಂದಿನ ಮಾತು. ಅಂದೂ ವಿಧಾನಸೌಧದ ಮುಖ್ಯದ್ವಾರದಲ್ಲಿ ಕನ್ನಡ ರಾಜ್ಯೋತ್ಸವ ಜನತಾ ಉತ್ಸವ ರೂಪದಿ ನಡೆಯುತ್ತಿತ್ತು. 60 ವರ್ಷ ಪೂರೈಸಿದ್ದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಬೆಳ್ಳಿಯ ಗುರಾಣಿ ನೀಡಿ ಪುಷ್ಪ ಮಾಲಿಕೆಯನ್ನು ಅರ್ಪಿಸಿ ಅಭಿನಂದಿಸಲಾಗಿತ್ತು.
ಆ ಸಂದರ್ಭದಲ್ಲಿ ದೇವರಾಜ ಅರಸು ಅವರು, ತಾವು ಮುಖ್ಯಮಂತ್ರಿ ಆಗಿರುವವರೆಗೆ ಬೆಳಗಾವಿಯನ್ನು ಬೇರ್ಪಡಿಸುವುದು ಯಾರಿಗೂ ಸಾಧ್ಯವಿಲ್ಲ . ಅದಕ್ಕೆ ತಾವು ಆಸ್ಪದ ನೀಡುವುದೂ ಇಲ್ಲ. ಬೆಳಗಾವಿಯನ್ನು ವರ್ಗಾಯಿಸಲು ಇಲ್ಲವೇ ವಿಭಜಿಸಲು ಖಂಡಿತಾ ಸಾಧ್ಯವಿಲ್ಲ ಎಂದು ಗಂಟಾಘೋಷವಾಗಿ ನುಡಿದಿದ್ದರು.
ಮುಂದಿನ ರಾಜ್ಯೋತ್ಸವದ ವೇಳೆಗೆ ಕನ್ನಡವನ್ನು ರಾಜ್ಯಮಟ್ಟದಲ್ಲಿ ಅಧಿಕೃತ ಆಡಳಿತ ಭಾಷೆಯನ್ನಾಗಿಸುವ ಭರವಸೆಯನ್ನೂ ನೀಡಿದ್ದರು. ಅದಕ್ಕಾಗಿ ಶಕ್ತಿ ಮೀರಿ ಶ್ರಮಿಸುವುದಾಗಿಯೂ ತಿಳಿಸಿದ್ದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡುವ ದಿಟ್ಟ ನಿರ್ಧಾರ ಕೈಗೊಂಡ ದೇವರಾಜ ಅರಸು ಅವರನ್ನು ಕನ್ನಡಿಗರು ಅಂದು ವೈಭವದಿಂದ ಸತ್ಕರಿಸಿ ಧನ್ಯವಾದ ಅರ್ಪಿಸಿದ್ದರು.
ದೇವರಾಜ ಅರಸು ಅವರು, ಕನ್ನಡ ಉಳಿಯ ಬೇಕು, ಕನ್ನಡ ಬೆಳೆಯಬೇಕು. ಕನ್ನಡಿಗರ ನಾಡಲ್ಲಿ ಕನ್ನಡವೇ ಆಡಳಿತ ಭಾಷೆ ಆಗಬೇಕು ಎಂದು 25 ವರ್ಷಗಳ ಹಿಂದೆಯೇ ಕನಸು ಕಟ್ಟಿದ್ದರು. ಟೊಂಕ ಕಟ್ಟಿ ದುಡಿದರು. ಅವರ ಅಂದಿನ ಆ ದಿಟ್ಟ ನಿರ್ಧಾರದಿಂದ ಇಂದೂ ಬೆಳಗಾವಿ ವಿಭಜನೆಯಾಗದೆ ಕರ್ನಾಟಕದಲ್ಲೇ ಉಳಿದಿದೆ. ಅವರ ಕನ್ನಡಪರ ನಿಲುವಿನ ಫಲವಾಗಿಯೇ ಆನಂತರದ ನಿರಭಿಮಾನಿ ಸರಕಾರಗಳಲ್ಲೂ ಕನ್ನಡ ಭಾಷೆ, ಆಡಳಿತದಲ್ಲಿ ಅಷ್ಟೋ ಇಷ್ಟೋ ಜೀವಂತವಾಗಿದೆ. ಇಲ್ಲವಾಗಿದ್ದರೆ, ಇಷ್ಟು ಹೊತ್ತಿಗೆ ಕನ್ನಡ ಅನ್ಯಭಾಷಿಕ ಐಎಎಸ್ ಅಧಿಕಾರಿಗಳ ತುಳಿತಕ್ಕೆ ಸಿಕ್ಕ ನಾಮಾವಶೇಷವಾಗಿ ಹೋಗುತ್ತಿತ್ತು.
ಗಡಿನಾಡ ಬೆಳಗಾವಿಯಲ್ಲಿ ಕನ್ನಡದ ಕಹಳೆ ಮೊಳಗಿಸಲು ದೇವರಾಜ ಅರಸು ಅವರು ಅಂದೇ ಪ್ರಯತ್ನಿಸಿದ್ದರು. ಆದರೆ ಇಂದು - ಈ ಹೊತ್ತು ಬೆಳಗಾವಿಯಲ್ಲಿರುವ ಐಪಿಎಸ್ ಅಧಿಕಾರಿ ಹಾಗೂ ಐಎಎಸ್ ಅಧಿಕಾರಿಗಳು ಕನ್ನಡ ಬಾರದ ಬಿಹಾರಿಗಳು ಎನ್ನುವುದನ್ನು ನೀವು ಗಮನಿಸಬೇಕು.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications