ತ್ವರಿತ ಅಲರ್ಟ್ ಗಳಿಗಾಗಿ
For Daily Alerts
80 ಲಕ್ಷ ರು. ಬೆಲೆಯ ಷೇರುಪತ್ರ ಕದ್ದಿದ್ದ ಕುಂದಾಪುರದ ವ್ಯಕ್ತಿ ಬಂಧನ
ಮಂಗಳೂರು : ಮುಂಬಯಿಯಲ್ಲಿ ಇನ್ಫೋಸಿಸ್ ಸಂಸ್ಥೆಯ 80 ಲಕ್ಷ ರೂಪಾಯಿ ಮುಖ ಬೆಲೆಯ ಷೇರುಪತ್ರಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ವಂಚಕರ ತಂಡದ ಸದಸ್ಯನನ್ನು ಮುಂಬಯಿ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಕುಂದಾಪುರ ನಾವುಂದದ ನಿವಾಸಿ ಎಂಜಿನಿಯರಿಂಗ್ ಪದವೀಧರ ಕರುಣಾಕರ ಮಹಾಬಲಶೆಟ್ಟಿ (32) ಬಂಧಿತ ಆರೋಪಿ. ಮಂಗಳವಾರ ಕರುಣಾಕರನನ್ನು ಬಂಧಿಸಿದ ಪೊಲೀಸರು ಆತನನ್ನು ಮುಂಬಯಿಗೆ ಕರೆದೊಯ್ದಿದ್ದಾರೆ. ಕರುಣಾಕರನ ಸಹವರ್ತಿ ಖ್ಯಾತ ಸಂಸ್ಥೆಯಾಂದರ ಚಾರ್ಟರ್ಡ್ ಅಕೌಂಟೆಂಟ್ ಸತೀಶ್ ಶೆಟ್ಟಿ, ಆತನ ಸಹೋದರ ಹರೀಶ್ ಶೆಟ್ಟಿ ಮತ್ತು ಗಣೇಶ್ ಈ ಅರೋಪದಲ್ಲಿ ಭಾಗಿಗಳು ಎನ್ನಲಾಗಿದೆ. ಮುಂಬಯಿ ಕನ್ನಡಿಗ ಪೊಲೀಸ್ ಅಧಿಕಾರಿ ದಯಾನಂದ ನಾಯಕ್ ನೇತೃತ್ವದ ತಂಡ ದಿಢೀರ್ ಕಾರ್ಯಾಚರಣೆ ನಡೆಸಿ ಈ ವಂಚಕರ ತಂಡವನ್ನು ಪತ್ತೆ ಹಚ್ಚಿದೆ.
(ಇನ್ಫೋ ವಾರ್ತೆ)
Comments
Story first published: Wednesday, November 1, 2000, 5:30 [IST]