ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವ ಸಂಗೀತ ಕಲಾವಿದರ ಸಮ್ಮೇಳನಾಧ್ಯಕ್ಷರಾಗಿ ಎಂ. ಎಂ.ನಾಗರಾಜ್‌

By Staff
|
Google Oneindia Kannada News

ಬೆಂಗಳೂರು : ಸಂಗೀತ ಕಲಾವಿದ ಮೈಸೂರು ಎಂ. ನಾಗರಾಜ್‌ ಈ ಸಾಲಿನ ಯುವ ಕಲಾವಿದರ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ನವೆಂಬರ್‌ ಮೂರರಿಂದ ಮೂರು ದಿನಗಳ ಕಾಲ ನಡೆಯುವ ಸಂಗೀತ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಪ್ರದೇಶದ ಯುವ ಕಲಾವಿದರ ಕೊಳಲು, ವೀಣೆ, ತನಿ ಪಿಟೀಲು, ಕಚೇರಿಗಳು ನಡೆಯಲಿವೆ. ಸಮ್ಮೇಳನವನ್ನು ಶೃಂಗೇರಿ ಶಂಕರ ಮಠ ಮತ್ತು ಕರ್ನಾಟಕ ಗಾನ ಕಲಾ ಪರಿಷತ್‌ ಆಯೋಜಿಸಿದ್ದು, ರಾಮಸುಧಾ ಚಾರಿಟೇಬಲ್‌ ಟ್ರಸ್ಟ್‌ ಪ್ರಾಯೋಜಿಸಿದೆ.

ಸಮ್ಮೇಳನದ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ರಾಜ್ಯ ವಾರ್ತಾ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌ ಸಮ್ಮೇಳನಾಧ್ಯಕ್ಷ ಮೈಸೂರು ಎಂ. ನಾಗರಾಜ್‌ ಅವರಿಗೆ ಗಾನಕಲಾ ಶ್ರೀ ಬಿರುದು ನೀಡಿ ಗೌರವಿಸಲಿದ್ದಾರೆ. ಸಮ್ಮೇಳನದ ಕೊನೆಯ ದಿನ ನವೆಂಬರ್‌ 5ರ ಭಾನುವಾರ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಡಿ.ವಿ. ಗುರುಪ್ರಸಾದ್‌ ಮತ್ತು ಡಾ. ಎ.ಎಚ್‌. ರಾಮ ರಾವ್‌ ಭಾಗವಹಿಸಲಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X