ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಂಗಳೂರು ಬಂದರಿನಲ್ಲಿ ಮಾಜಿ ಪ್ರಧಾನಿ-ಗ-ಳಿಬ್ಬ-ರ ಧರಣಿ
ಮಂಗಳೂರು : ಕೇಂದ್ರ ಸರಕಾರದ ಆರ್ಥಿಕ ನೀತಿ ಮತ್ತು ವಿದೇಶೀ ವಸ್ತುಗಳ ಮುಕ್ತ ಆಮದು ನೀತಿಯನ್ನು ವಿರೋಧಿಸಿ ಮಾಜಿ ಪ್ರಧಾನಿಗಳಾದ ವಿ.ಪಿ. ಸಿಂಗ್ ಮತ್ತು ಎಚ್. ಡಿ. ದೇವೇಗೌಡ ಶನಿವಾರ ನವಮಂಗಳೂರು ಬಂದರಿನ ಮುಂದೆ ಧರಣಿ ಕೂರಲಿದ್ದಾರೆ.
ದೇಶದ ಕೈಗಾರಿಕೆ ಮತ್ತು ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಕೇಂದ್ರದ ಆರ್ಥಿಕ ನೀತಿಯಿಂದ ರೈತರಿಗೆ ತೀವ್ರ ಹಾನಿಯಾಗುತ್ತಿದ್ದು, ಇಬ್ಬರೂ ಪ್ರಧಾನಿಗಳು ಕೇಂದ್ರದ ಧೋರಣೆಯ ವಿರುದ್ಧ ತಮ್ಮ ಪ್ರತಿಭಟನೆ ವ್ಯಕ್ತಪಡಿಸಲಿದ್ದಾರೆ.
ಇಬ್ಬರೂ ಮಾಜಿ ಪ್ರಧಾನಿಗಳು ಶನಿವಾರ ಮಧ್ಯಾಹ್ನ 2.30 ಕ್ಕೆ ಧ-ರ-ಣಿ ನಡೆಸಿ, ನಂತರ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸುತ್ತಾರೆ. ದೇವೇಗೌಡರು ಕಾಲ್ನಡಿಗೆಯಲ್ಲಿಯೇ ಮೆರವಣಿಗೆಯಲ್ಲಿ ಸಾಗಲಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Friday, October 20, 2000, 5:30 [IST]