ಚೆನ್ನಮ್ಮ ಜೈಲಿಗೆ ಹೋದ ವಾರದಲ್ಲಿ ಕಿತ್ತೂರು ಉತ್ಸವ ?
ಬೆಳಗಾಂ : ರಾಣಿ ಕಿತ್ತೂರು ಚೆನ್ನಮ್ಮ ಬ್ರಿಟಿಷರನ್ನು ಗೆದ್ದ ದಿನವನ್ನು ವಿಜಯೋತ್ಸವವಾಗಿ ಆಚರಿಸುವುದರ ಬದಲು ಮೋಸದಿಂದ ಬ್ರಿಟಿಷರು ಆಕೆಯನ್ನು ಬಂಧಿಸಿದ ವಾರದಲ್ಲಿ ವಿಜಯೋತ್ಸವ ಆಚರಿಸುತ್ತಿರುವುದನ್ನು ಕಿತ್ತೂರು ಗ್ರಾಮದ ಜನರು ವಿರೋಧಿಸಿದ್ದಾರೆ.
ಅಕ್ಟೋಬರ್ 23 ರಂದು ಬೆಳಗಾಂನಲ್ಲಿ ಕಿತ್ತೂರು ಉತ್ಸವವನ್ನು ಆಚರಿಸಬೇಕಾಗಿತ್ತು. ಆದರೆ ಜಿಲ್ಲಾಡಳಿತ ಡಿಸೆಂಬರ್ ಮೊದಲ ವಾರದಲ್ಲಿ ಉತ್ಸವ ಆಚರಿಸಲು ನಿರ್ಧರಿಸಿದೆ. ಅದು, ರಾಣಿ ಚೆನ್ನಮ್ಮ ಜೈಲಿಗೆ ಹೋದ ವಾರವಾಗಿದೆ ಎಂದು ಕಿತ್ತೂರಿನ ಗ್ರಾಮಸ್ಥರು ಎಷ್ಟೇ ವಿರೋಧ ವ್ಯ-ಕ್ತ ಪಡಿಸಿದರೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಡಿ. ಇನಾಂದಾರ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ರಾಣಿ - ಸತೀಶ್ ಉತ್ಸವವನ್ನು ಡಿಸೆಂಬರ್ನಲ್ಲಿ ಆಚರಿಸಲು ತೀರ್ಮಾನಿಸಿದ್ದಾರೆ.
ಅಕ್ಟೋಬರ್ 23ರಂದು ವಿಧಾನ ಮಂಡಲ ಅಧಿವೇ-ಶನ ಆರಂಭವಾ-ಗುವುದರಿಂದ ಮಂತ್ರಿಗಳಿಗೆ ಈ ಉತ್ಸವದಲ್ಲಿ ಭಾಗವಹಿಸಲಾಗುತ್ತಿಲ್ಲ . ಆದ್ದರಿಂದ ಡಿಸೆಂಬರ್ನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊ-ಳ್ಳಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.
(ಇನ್ಫೋ ವಾರ್ತೆ)