ರಾಜ್ಕುಮಾರ್ ಬಿಡುಗಡೆ ಆಗಿದೆ, ಇಂದು ರಾತ್ರಿ ಚೆನ್ನೈಗೆ?
ಬೆಂಗಳೂರು : ಸೋಮವಾರವೇ ಗುರುವಾರವಾಯ್ತು. 78 ದಿನಗಳ ವನವಾಸಾನಂತರ ರಾಜ್ಕುಮಾರ್ ಬಿಡುಗಡೆಯಾಯಿತು. ಸೋಮವಾರ ಬೆಳಗ್ಗೆ 9.45ರ ಸುಮಾರಿನಲ್ಲಿ ಡಾ. ರಾಜ್ಕುಮಾರ್ ಅವರನ್ನು ವೀರಪ್ಪನ್ ಬಿಡುಗಡೆ ಗೊಳಿಸಿದ್ದು, ಪಳ ನೆಡುಮಾರನ್ರೊಂದಿಗೆ ರಾಜ್ ಹಾಗೂ ಇತರ ಒತ್ತೆಯಾಳುಗಳು ಕಾಡಿನಿಂದ ನಾಡಿನತ್ತ ಪ್ರಯಾಣ ಬೆಳಸಿದ್ದಾರೆಂದು ಹೆಸರು ಹೇಳಲು ಇಚ್ಛಿಸದ ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಯಾಬ್ಬರು ಹೇಳಿದ್ದಾರೆ.
ರಾಜ್ ಬಿಡುಗಡೆಯ ಸುದ್ದಿ ಅಧಿಕೃತವಾಗಿ ಹೊರಬಿದ್ದರೆ, ಕರ್ನಾಟಕದಲ್ಲಿ ವಾಸಮಾಡುತ್ತಿರುವ ತಮಿಳರಿಗೆ ಅಪಾಯ ಆಗಬಹುದೆಂಬ ಕಾರಣದಿಂದ ಹಾಗೂ ರಾಜ್ ಅಭಿಮಾನಿಗಳ ಉತ್ಸಾಹದ ಆಚರಣೆಯ ಸಂಭ್ರಮವನ್ನು ನಿಯಂತ್ರಿಸಲು ಪೊಲೀಸರು ಸಜ್ಜಾಗಬೇಕಾಗಿರುವ ಹಿನ್ನೆಲೆಯಲ್ಲಿ ಈ ವಿಷಯವನ್ನು ಗೌಪ್ಯವಾಗಿಡಲಾಗಿದೆ ಎಂದೂ ಅವರು ಹೇಳಿದ್ದಾರೆ.
ಆದರೆ, ರಾಜ್ಕುಮಾರ್ ಅವರು ಬಿಡುಗಡೆಯಾಗಿರುವ ವಿಷಯವನ್ನು ಅಧಿಕೃತವಾಗಿ ಎರಡೂ ಸರಕಾರಗಳೂ ದೃಢಪಡಿಸಿಲ್ಲ. ಮೂಲಗಳ ಹೇಳಿಕೆಯ ರೀತ್ಯ ಡಾ.ರಾಜ್ಕುಮಾರ್ ಹಾಗೂ ಅವರ ಸಂಬಂಧಿಕರಾದ ಗೋವಿಂದರಾಜ್ ಹಾಗೂ ನಾಗೇಶ್ ಅವರನ್ನು ಕರೆದುಕೊಂಡು ನಾಡಿನತ್ತ ಹೊರಟಿರುವ ಪಳನೆಡುಮಾರನ್, ಕಲ್ಯಾಣಿ ನೇತೃತ್ವದ ತಂಡ ಸೋಮವಾರ ಸಂಜೆ 7 ಗಂಟೆಯ ಹೊತ್ತಿಗೆ ತಮಿಳುನಾಡು ಗಡಿಯ ಈರೋಡ್ ಜಿಲ್ಲೆಯ ತೆನ್ನು ಮುರುಡು ಕಾನನದ ಮೂಲಕ ನಾಡಿಗೆ ಅಡಿ ಇಡುತ್ತದೆ ಎಂದೂ ಗೊತ್ತಾಗಿದೆ.
ಕಾಡಿನ ಕೊನೆಗೆ ಆಗಮಿಸುವ ಸುಸಜ್ಜಿತ ಆ್ಯಂಬುಲೆನ್ಸ್ನಲ್ಲಿ ರಾಜ್ಕುಮಾರ್ ಹಾಗೂ ಇತರರು ಚೆನ್ನೈಗೆ ಸೋಮವಾರ ರಾತ್ರಿ ತಲುಪುತ್ತಾರೆ ಎಂದೂ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಸೋಮವಾರ ರಾತ್ರಿ ಇಲ್ಲವೇ ಮಂಗಳವಾರ ಬೆಳಗ್ಗೆ ರಾಜ್ಕುಮಾರ್ ಅವರು ಕರುಣಾನಿಧಿ ಅವರೊಂದಿಗೆ ಮಾಧ್ಯಮಗಳ ಕ್ಯಾಮಾರಾ ಮುಂದೆ ಬರಲಿದ್ದಾರೆ. ಅವರು, ಶಾಂತಿ ಕಾಪಾಡುವಂತೆ ಕನ್ನಡಿಗರಿಗೆ ಮನವಿ ಮಾಡಿದ ನಂತರ ಮಂಗಳವಾರ ಸಂಜೆ ಅವರನ್ನು ಬೆಂಗಳೂರಿಗೆ ವಿಶೇಷ ಹೆಲಿಕಾಪ್ಟರ್ನಲ್ಲಿ ಕಳುಹಿಸಿಕೊಡುತ್ತಾರೆ ಎಂದೂ ಅವರು ಹೇಳಿದ್ದಾರೆ.
ಕ್ಷಣದಲ್ಲಿ ಹಬ್ಬಿದ ಸುದ್ದಿ : ರಾಜ್ ಬಿಡುಗಡೆಯಾಗಿದ್ದಾರೆ ಎನ್ನುವ ಸುದ್ದಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ 4 ಗಂಟೆಗೆ ಎಲ್ಲೆಡೆ ಹಬ್ಬಿತ್ತು. ಈ ಸುದ್ದಿ ಊರೆಲ್ಲಾ ಕ್ಷಣ ಮಾತ್ರದಲ್ಲಿ ಸುತ್ತಾಡಿ ಬಂತು. ಬಿಡುಗಡೆ ಸುದ್ದಿ ನಿಜವೋ ಸುಳ್ಳು ಎಂದು ಖಚಿತ ಪಡಿಸಿಕೊಳ್ಳಲು ಮಾಧ್ಯಮದ ಕಚೇರಿಗಳಿಗೆ ಅಸಂಖ್ಯಾತ ದೂರವಾಣಿ ಕರೆಗಳು ಬಂದವು. ಮೊಬೈಲ್ ಫೋನ್ಗಳಲ್ಲೂ ಈ ಸುದ್ದಿ ನಗರವನ್ನೆಲ್ಲಾ ಸುತ್ತಿ ಬಂದಿದೆ.
ವಾರ್ತಾ ಸಂಚಯ
ಮುಖಪುಟ / ರಾಜ್ ಅಪಹರಣ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications