ರಾಜಕುಮಾರ್ ಬಿಡುಗಡೆ ಆಗೇಬಿಟ್ಟಿದೆ ಎಂಬ ಸುದ್ದಿ ನಿಜಾನಾ?
ಬೆಂಗಳೂರು: ರಾಜ್ ನಾಡಿಗೆ ಬಂದೇಬಿಟ್ಟರು ಎಂಬ ಸುದ್ದಿಗಳ ಪ್ರವಾಹ ಭಾನುವಾರ ಮಧ್ಯಾಹ್ನದಿಂದಲೂ ಉಕ್ಕಿ ಹರಿಯುತ್ತಲೇ ಇದೆ. ಅವರನ್ನು ಸ್ವಾಗತಿಸಲು ಸಿದ್ಧತೆಗಳೂ ಭರದಿಂದ ನಡೆಯುತ್ತಿವೆ ಎಂಬಂತಹ ಸುದ್ದಿಗಳೂ ಅಲೆಮಾರಿಯಂತೆ ಸುತ್ತುತ್ತಿವೆ. ಆದರೆ ವಾಸ್ತವವಾಗಿ ನೆಡುಮಾರನ್ ಮತ್ತು ವೀರಪ್ಪನ್ ನಡುವೆ ಇನ್ನೂ ಸಂಧಾನ ಮುಂದುವರೆದಿದ್ದು ಸೋಮವಾರ ಸಂಜೆ ಹೊತ್ತಿಗೆ ಖಚಿತ ವರ್ತಮಾನ ಬರಬಹುದೆಂದು ನಕ್ಕಿರನ್ ಪತ್ರಿಕೆ ಸಹಸಂಪಾದಕ ಕಾಮರಾಜ್ ಸೋಮವಾರ ಮಧ್ಯಾನ್ಹದ ಸುದ್ದಿಗೋಷ್ಠಿಯಲ್ಲಿ ದೃಢಪಡಿಸಿದ್ದಾರೆ.
ರಾಜ್ ಬಿಡುಗಡೆ ಬಗ್ಗೆ ಈವರೆಗಿನ ವರದಿಗಳನ್ನು ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಸೇರಿದಂತೆ ಯಾವುದೇ ಸರಕಾರಗಳು ಅಧಿಕೃತವಾಗಿ ಖಚಿತಪಡಿಸಿಲ್ಲ. ಒಟ್ಟಾಗಿ ಹೇಳಬೇಕೆಂದರೆ ಎಲ್ಲವೂ-ಹೇಳಲಾಗಿದೆ, ಎನ್ನಲಾಗಿದೆ, ಮೂಲಗಳು ತಿಳಿಸಿವೆ, ನಿಕಟವರ್ತಿಗಳು ಹೇಳಿದ್ದಾರೆ ಎಂಬಂತಹ ಸುದ್ದಿಗಳೇ ಆಗಿವೆ.ಈರೋಡ್ ಆಸ್ಪತ್ರೆಯಲ್ಲಿ ರಾಜ್ : ಇದೀಗ ಹುಟ್ಟಿಕೊಂಡಿರುವ ಸುದ್ದಿಗಳ ಪ್ರಕಾರ ರಾಜ್ ಈರೋಡ್ನ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದು. ಇನ್ನೂ ಕೆಲವು ವರ್ತಮಾನಗಳ ಪ್ರಕಾರ ರಾಜ್ ಮತ್ತು ಸಂಗಡಿಗರೊಂದಿಗೆ ಸಂಧಾನಕಾರರು ಚೆನ್ನೈ ಕಡೆ ಧಾವಿಸುತ್ತಿದ್ದಾರೆ.
ಸಜ್ಜಾದ ಗಾಜನೂರು : ಬಿಡುಗಡೆಯ ವರ್ತಮಾನಕ್ಕೆ ತುರ್ತಾಗಿ ಸ್ಪಂದಿಸಿರುವ ರಾಜ್ ಹುಟ್ಟೂರಾದ ಗಾಜನೂರು ಕನ್ನಡ ನಾಡಿನ ಹೆಮ್ಮೆಯ ಕುವರನ ಸ್ವಾಗತಕ್ಕೆ ಸಿದ್ಧಗೊಂಡಿದೆ. ರಾಜ್ ಮನೆಮುಂದೆ ಜನಜಂಗುಳಿ ಮಡುಗಟ್ಟಿ ನಿಂತಿದೆ. ಬೆಂಗಳೂರಿನಲ್ಲೂ ಕೂಡಾ ರಾಜ್ ಕುಟುಂಬ ಯಾವುದೇ ಕ್ಷಣದಲ್ಲಿ ಹೊರಡಲು ಸಿದ್ಧವಾಗಿ ನಿಂತಿದೆ. ಇನ್ನೊಂದು ಸುದ್ದಿಯ ಪ್ರಕಾರ ರಾಜ್ ಅವರನ್ನು ಕರೆದುಕೊಂಡು ಬರಲು ಒಂದು ಹೆಲಿಕಾಪ್ಟರ್ ಅನ್ನು ರಾಜ್ ಕುಟುಂಬದವರು ಬಾಡಿಗೆ ಪಡೆದು ಸಂದೇಶಕ್ಕಾಗಿ ಕಾಯುತ್ತಿದ್ದಾರೆ.
ಬಿಗಿಭದ್ರತೆ: ಈ ನಡುವೆ ಬೆಂಗಳೂರಿನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ವ್ಯಾಪಕ ಬಂದೋಬಸ್ತ್ನ ಉಸ್ತುವಾರಿಗೆ ಹಿರಿಯ ಪೊಲೀಸ್ ಅಧಿಕಾರಿಗಳೇ ಬೀದಿಗಿಳಿದಿದ್ದಾರೆ. ಕಳೆದ 76 ದಿನಗಳಿಂದ ವೀರಪ್ಪನ್ ವಶದಲ್ಲಿರುವ ರಾಜ್ ಮತ್ತು ಸಂಗಡಿಗರ ಅಪಹರಣ ಪ್ರಕರಣಕ್ಕೆ ಅಂತಿಮ ಪರಿಹಾರ ಸಿಕ್ಕೇ ಸಿಗಬಹುದೆಂಬ ಬಹುನಿರೀಕ್ಷಿತ ಸುದ್ದಿಗೆ ಎಲ್ಲರೂ ಬಿಡುಗಣ್ಣಾಗಿ ಕಾಯುತ್ತಿದ್ದಾರೆ.
(ಇನ್ಫೊ ವಾರ್ತೆ)
।
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications