Get Updates
Get notified of breaking news, exclusive insights, and must-see stories!

ರಾಜ್‌ ಬಿಡುಗಡೆಯ ಸುದ್ದಿಗಳೆಲ್ಲಾ ಶುದ್ಧ ಸುಳ್ಳು : ಸಚಿವ ಖರ್ಗೆ

ಬೆಂಗಳೂರು : ರಾಜ್‌ಕುಮಾರ್‌ ಹಾಗೂ ಇತರ ಇಬ್ಬರು ಒತ್ತೆಯಾಳುಗಳನ್ನು ಕಾಡುಗಳ್ಳ ವೀರಪ್ಪನ್‌ ಬಿಡುಗಡೆಗೊಳಿಸಿದ್ದಾನೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ ಎಂದು ರಾಜ್ಯದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ವದಂತಿಗಳಿಗೆ ಕಿವಿಗೊಡದಂತೆ ಅವರು ಮನವಿ ಮಾಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ವೀರಪ್ಪನ್‌ ಜತೆಗಿನ ಈ ಬಾರಿಯ ಸಂಧಾನ ಶುಭಕರವಾಗಿ ಸಾಗಿದೆ. ಅವರು, ರಾಜ್‌ಕುಮಾರ್‌ ಅವರನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬರುವ ಬಗ್ಗೆ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ ಎಂದು ಸರಕಾರಕ್ಕೆ ಬಂದಿರುವ ಖಚಿತ ಮಾಹಿತಿಗಳು ತಿಳಿಸುತ್ತವೆ ಎಂದು ಹೇಳಿದ್ದಾರೆ. ರಾಜ್ಯ ಸರಕಾರವು ತಮಿಳುನಾಡು ಉನ್ನತಾಧಿಕಾರಿಗಳೊಂದಿಗೆ ಸತತ ಸಂಪರ್ಕ ಇಟ್ಟುಕೊಂಡಿದ್ದು, ಯಾವುದೇ ಕ್ಷಣದಲ್ಲಿ ಶುಭವಾರ್ತೆ ಹೊರಬೀಳುತ್ತದೆ ಎಂದೂ ಹೇಳಿದ್ದಾರೆ.

ರಾಜ್‌ಕುಮಾರ್‌ ಅವರ ಬಿಡುಗಡೆಗೆ ಯಾವುದೇ ನಿರ್ದಿಷ್ಟ ಗಡುವು ಅಥವಾ ಸಮಯ ನಿಗದಿಪಡಿಸಲಾಗಿಲ್ಲ ಎಂದ ಅವರು, ಕಾಡಿನ ಅಂಚಿನಲ್ಲಿ ಸುಳಿದಾಡುತ್ತಿರುವ ವಾಹನಗಳ ಬಗ್ಗೆ ಪ್ರಶ್ನಿಸಿದಾಗ, ರಾಜ್ಯ ಸರಕಾರ ಯಾವುದೇ ವಾಹನಗಳನ್ನು ಕಾಡಿನಂಚಿಗೆ ಕಳುಹಿಸಿಲ್ಲ ಎಂದು ಹೇಳಿದರು. ನೆಡುಮಾರನ್‌ ಹಾಗೂ ಗೋಪಾಲ್‌ ಅವರ ಕಚೇರಿಯಿಂದ ಬರುತ್ತಿರುವ ವರದಿಗಳ ಬಗ್ಗೆ ಪ್ರತಿಕ್ರಿಯಿಸಲೂ ಅವರು ನಿರಾಕರಿಸಿದರು.

ಅಧಿಕೃತ ಮಾಹಿತಿಗಷ್ಟೇ ಮನ್ನಣೆ : ವದಂತಿಗಳಿಗೆ ಅಥವಾ ಬೇರಾವುದೇ ಮೂಲದ ಸುದ್ದಿಗೆ ರಾಜ್ಯ ಸರಕಾರ ಕಿವಿಗೊಡುವುದಿಲ್ಲ. ತಮಿಳುನಾಡು ಸರಕಾರದಿಂದ ಅಧಿಕೃತ ಮಾಹಿತಿ ಬರುವವರೆಗೂ ಕಾಯುತ್ತೇವೆ ಎಂದು ಅವರು ಹೇಳಿದರು. (ಯು.ಎನ್‌.ಐ)

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+