ಕಡಿಮೆಯಾದ ಮಳೆಯ ಆರ್ಭಟ
ಬೆಂಗಳೂರು : ಮಳೆಯ ಆರ್ಭಟ ಕಡಿಮೆಯಾಗಿದೆ. ರಾಜ್ಯದಲ್ಲಿ ಕೊಟ್ಯಂತರ ರುಪಾಯಿ ನಷ್ಟ ಉಂಟು ಮಾಡಿದ ಮಳೆರಾಯ ಕಳೆದ 24 ಗಂಟೆಗಳ ಅವಧಿಯಲ್ಲಿ ಶಾಂತನಾಗಿ ವಿರಮಿಸಿದ್ದಾನೆ. ಉತ್ತರ ಒಳನಾಡು ಹಾಗೂ ಕರಾವಳಿಯ ಕೆಲವೆಡೆ ಸಾಧಾರಣವಾಗಿ ಮಳೆ ಸುರಿಸಿ, ಉಳಿದಂತೆ ಸೂರ್ಯನಿಗೆ ಸುಡಲು ಅನುವು ಮಾಡಿಕೊಟ್ಟು ತಾನು ತಣ್ಣಗಾಗಿದ್ದಾನೆ.
ಹೀಗಾಗಿ ದಕ್ಷಿಣ ಒಳನಾಡಿನಲ್ಲಿ ತಾಪಮಾನ ಸಾಮಾನ್ಯಕ್ಕಿಂತಲೂ ಹೆಚ್ಚಾಗಿತ್ತು. ರಾಜ್ಯದ ಉಳಿದ ಭಾಗಗಳಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ. ಹಗಲಿನ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಗುಲ್ಬರ್ಗಾದಲ್ಲಿ ದಾಖಲಾಗಿದ್ದರೆ, ರಾತ್ರಿಯ ಕನಿಷ್ಠ ಉಷ್ಣಾಂಶ ಬೆಳಗಾವಿಯಲ್ಲಿ (18.8) ದಾಖಲಾಗಿದೆ.
ಬೆಳಗಾವಿಯಲ್ಲಿ 4 ಸೆಂಟಿ ಮೀಟರ್, ಪುತ್ತೂರಿನಲ್ಲಿ 3, ಗುಲ್ಬರ್ಗಾದಲ್ಲಿ 2, ಬೆಳ್ತಂಗಡಿ, ಚಿಕ್ಕೋಡಿ, ಗೋಕಾಕ್, ಬೆಳಗಾವಿ ವಿಮಾನ ನಿಲ್ದಾಣಗಳಲ್ಲಿ ತಲಾ 1 ಸೆಂಟಿ ಮೀಟರ್ ಮಳೆ ಬಿದ್ದಿದೆ.
ಮುನ್ಸೂಚನೆಯಂತೆ
ರಾಜ್ಯದ
ಕೆಲವೆಡೆ
ಮಳೆ
ಬೀಳುವ
ನಿರೀಕ್ಷೆ
ಇದೆ.
ಸ್ಥಳೀಯ
ಹವಾಮಾನ
ಮುನ್ಸೂಚನೆಯಂತೆ
ಬೆಂಗಳೂರು
ಹಾಗೂ
ಸುತ್ತಮುತ್ತಲ
ಪ್ರದೇಶಗಳಲ್ಲಿ
ಭಾಗಶಃ
ಮೋಡ
ಕವಿದ
ವಾತಾವರಣ
ಇದ್ದು,
ಹಗಲಿನ
ಗರಿಷ್ಠ
ಉಷ್ಣಾಂಶ
29
ಡಿಗ್ರಿ
ಹಾಗೂ
ಕನಿಷ್ಠ
ಉಷ್ಣಾಂಶ
19
ಡಿಗ್ರಿ
ಸೆಲ್ಸಿಯಸ್
ಇರುವ
ಸಾಧ್ಯತೆ
ಇದೆ
ಎಂದು
ಹವಾಮಾನ
ಇಲಾಖೆ
ತಿಳಿಸಿದೆ.
ಮುಖಪುಟ
/
ಹವಾ
ಹವಾ