Get Updates
Get notified of breaking news, exclusive insights, and must-see stories!

ರಾಜ್‌ ಅಪಹರಣ: ಪರ್ಯಾಯ ಕಾರ್ಯತಂತ್ರಕ್ಕೆಅಡ್ವಾಣಿಗೆ ಮನವಿ

ಬೆಂಗಳೂರು : ಅಹಪೃತ ರಾಜ್‌ ಹಾಗೂ ಸಂಗಡಿಗರ ಶೀಘ್ರ ಬಿಡುಗಡೆಗೆ ಪರ್ಯಾಯ ಕಾರ್ಯತಂತ್ರ ರೂಪಿಸಬೇಕೆಂದು ಅಖಿಲ ಕರ್ನಾಟಕ ರಾಜ್‌ ಅಭಿಮಾನಿಗಳ ಸಂಘ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗಳು ಕೇಂದ್ರ ಸರಕಾರಕ್ಕೆ ಮನವಿ ಮಾಡಿವೆ.

ಈ ಸಂಬಂಧ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ. ಸಿ. ಎನ್‌. ಚಂದ್ರಶೇಖರ್‌ ಹಾಗೂ ಟಾಡಾ ಬಂಧಿತರ ಪರ ವಾದಿಸುತ್ತಿರುವ ಮೈಸೂರಿನ ವಕೀಲ ವೇಣುಗೋಪಾಲ್‌, ಶುಕ್ರವಾರ ಗೃಹಸಚಿವ ಎಲ್‌. ಕೆ. ಆಡ್ವಾಣಿ ಅವರನ್ನು ಬೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆಯಾದರೂ ಕಾನೂನು ತೊಡಕು ಉಂಟಾಗಿರುವ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಪರ್ಯಾಯ ಕಾರ್ಯತಂತ್ರಕ್ಕೆ ಮುಂದಾಗಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಕೋರ್ಟ್‌ಗೆ ಮನವರಿಕೆ : ಅಪಹರಣದ ನಂತರ ಎರಡೂ ರಾಜ್ಯಗಳ ಪರಿಸ್ಥಿತಿ ಬಗ್ಗೆ ಕೇಂದ್ರ ಸರಕಾರದ ಬೇಹುಗಾರಿಕೆ ಇಲಾಖೆ ಸಂಗ್ರಹಿಸಿರುವ ವರದಿಯನ್ನು ಸುಪ್ರಿಂಕೋರ್ಟ್‌ಗೆ ಸಲ್ಲಿಸುವಂತೆ ಈ ಸಂದರ್ಭದಲ್ಲಿ ಅಡ್ವಾಣಿ ಅವರನ್ನು ಕೋರಿದರು.

ದಟ್ಟ ಕಾಡಿನಲ್ಲಿ ಸಂಚರಿಸುವ ಕಾಡುಗಳ್ಳನ ಬಗೆಗಿನ ಮಾಹಿತಿ ಕೊರತೆಯೂ ಸೇರಿದಂತೆ ಅನೇಕ ಕಾರಣಗಳಿಂದ ವೀರಪ್ಪನ್‌ ಬಂಧನ ಸಾಧ್ಯವಾಗಿಲ್ಲ. ಇಷ್ಟಲ್ಲದೆ, ವೀರಪ್ಪನ್‌ ಬೇಡಿಕೆಯಂತೆ ಟಾಡಾ ಬಂಧಿಗಳನ್ನು ಬಿಡಲು ಎರಡೂ ಸರಕಾರಗಳು ಕೈಗೊಂಡಿರುವ ನಿರ್ಧಾರ ಸಮುದಾಯದ ಹಿತ ಕಾಪಾಡಲು ಎಂಬುದನ್ನು ಕೇಂದ್ರ ಸರಕಾರ, ಸರ್ವೋಚ್ಚ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿಯಲ್ಲಿ ಕೇಳಿಕೊಳ್ಳಲಾಗಿದೆ.

ಕೇಂದ್ರ ಸಹಕಾರ: ರಾಜ್‌ ಹಾಗೂ ಇತರ ಇಬ್ಬರು ಸಹಚರರ ಬಿಡುಗಡೆಗೆ ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಕೈಗೊಳ್ಳುವ ಎಲ್ಲ ಕ್ರಮಗಳಿಗೆ ಕೇಂದ್ರ ಸರಕಾರ ಎಲ್ಲ ರೀತಿಯ ಸಹಕಾರ ನೀಡುವುದು ಎಂದು ಆಡ್ವಾಣಿ ಹೇಳಿದ್ದಾರೆ.

ಅಪಹರಣ ಪ್ರಕರಣದ ಕುರಿತು ಕೇಂದ್ರದ ನಿಲುವನ್ನು ಎರಡೂ ರಾಜ್ಯಗಳಿಗೆ ತಿಳಿಸಲಾಗಿದೆ ಎಂದು ಹೇಳಿರುವ ಆಡ್ವಾಣಿ ವಿವರ ನೀಡಲು ನಿರಾಕರಿಸಿದ್ದಾರೆ. ನೆಡುಮಾರನ್‌ ಅವರನ್ನು ಸಂಧಾನಕಾರರನ್ನಾಗಿ ಕಳಿಸಿರುವುದು ಕೇಂದ್ರಕ್ಕೆ ಸಂಬಂಧಿಸಿದ ವಿಷಯವಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದಾರೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+