ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ-ರ್ವ ಧರ್ಮೀ-ಯ-ರಿ-ಗೆ ದರ್ಶ-ನ ನೀಡು-ವ ಹಾದಿ-ಯಲ್ಲಿ ಗುರು-ವಾ-ಯೂ-ರು ಕೃ-ಷ್ಣ

By Staff
|
Google Oneindia Kannada News

ತಿರುವನಂತಪುರಂ : ಗುರುವಾಯೂರಿನ ಶ್ರೀ ಕೃಷ್ಣ ದೇವಸ್ಥಾನಕ್ಕೆ ಹಿಂದೂಯೇತರರಿಗೂ ಪ್ರವೇಶ ನೀಡುವ ಕುರಿತು ಪರಿಶೀಲಿಸಲಾಗು-ತ್ತಿದೆ ಎಂದು ರಾಜ್ಯ ದೇವಸ್ಥಾನಗಳ ಸಚಿವ ಸಿ. ಕೆ. ನಾಣು ಹೇಳಿದ್ದಾರೆ.

ಹೀಗೆ ಸರ್ವರಿಗೂ ಪ್ರವೇಶ ನೀಡುವುದರಿಂದಾಗಿ ದೇವಸ್ಥಾನದ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು. ಹಿನ್ನೆಲೆ ಗಾಯಕ ಯೇಸುದಾಸ್‌ ಕ್ರೆೃಸ್ತರಾದರೂ ಕೃಷ್ಣ ಲೀಲೆಗಳನ್ನು ವರ್ಣಿಸುವ ಅನೇಕ ಭಕ್ತಿ ಗೀತೆಗಳನ್ನು ಅವರು ಹಾಡಿದ್ದಾರೆ. ಆದರೆ ಅವರಿಗೆ ದೇವಸ್ಥಾನದೊಳಗೆ ಪ್ರವೇಶ ನೀಡಲಾಗುತ್ತಿಲ್ಲ ಎಂದ ಅವರು, ಈ ಪದ್ಧ-ತಿ ಬದ-ಲಾ-ಗು-ವ ಬಗೆ-ಗಿ-ನ ತಮ್ಮ ಒಲ-ವ-ನ್ನು ವ್ಯಕ್ತ-ಪ-ಡಿ-ಸಿ-ದ-ರು. ಆದ-ರೆ, ಇದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ಸ್ಪ-ಷ್ಟಪ-ಡಿ-ಸಿ-ದರು.

ಇತ್ತೀಚೆಗೆ ಕಾಂಗ್ರೆಸ್‌ ನಾಯಕ ವಯಲಾರ್‌ ರವಿ ಅವರ ಮಗ ದೇವಸ್ಥಾನಕ್ಕೆ ಪ್ರವೇಶಿಸಿದ ನಂತರ ಅವರು ಹಿಂದೂಯೇತರರು ಎಂಬ ಭಾವನೆಯಿಂದ, ದೇವಸ್ಥಾನದಲ್ಲಿ ನಡೆದ ಶುದ್ಧೀಕರಣ ಪ್ರಕ್ರಿಯೆಯನ್ನು ದುರದೃಷ್ಟಕರ ಎಂದು ಸಚಿ-ವ-ರು ವರ್ಣಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ದೇವಸ್ಥಾನದ ಚಟುವಟಿಕೆಗಳಲ್ಲಿ ಮಧ್ಯ ಪ್ರವೇಶಿಸುವ ಅಧಿಕಾರ ಸರಕಾರಕ್ಕಿಲ್ಲ . ಆದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲು ವಿವಿಧ ಹಂತಗಳಲ್ಲಿ ಚರ್ಚೆ ನಡೆಸಲಾಗುವುದು ಎಂದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X