ಮೊರ್ಯಾಕೋದಲ್ಲಿ ಕ್ರಿಕೆಟ್ ಬೆಳೆಸುತ್ತಿರುವ ಮೊಹಿಂದರ್
ದುಬೈ : ಕಳೆದ ನಾಲ್ಕೈದು ತಿಂಗಳಿಂದ ಕ್ರಿಕೆಟ್ಗೆ ಮೆತ್ತಿದ್ದ ಮಸಿಯನ್ನು ತೊಳೆಯುವಂತೆ ಭಾರತ ಕ್ರಿಕೆಟ್ ತಂಡ ಒಂದೆಡೆ ಆಡುತ್ತಿದ್ದರೆ, ಕ್ರಿಕೆಟ್ ಪ್ರೇಮಿಗಳ ಬಾಯಲ್ಲಿ ಕೇಳಿಬರುತ್ತಿರುವ ಶಾರ್ಜಾ ಸ್ಥಾನವನ್ನೇ ಮೊರ್ಯಾಕೋಗೂ ದೊರಕಿಸಿಕೊಡುವ ಯತ್ನಗಳು ನಡೆಯುತ್ತಿವೆ.
1983ರ ವಿಶ್ವ ಕಪ್ ಗೆದ್ದ ಭಾರತ ತಂಡದಲ್ಲಿ ಮಿಂಚಿದ್ದ ಆಲ್ರೌಂಡರ್ ಮೊಹಿಂದರ್ ಅಮರ್ನಾಥ್ ಇನ್ನೊಂದು ವರ್ಷ ಮೊರ್ಯಾಕೋದಲ್ಲಿ ಕ್ರಿಕೆಟ್ ಬೆಳೆಸುವ ಕಾಯಕದಲ್ಲಿ ತೊಡಗಲಿದ್ದಾರೆ.
ಶಾರ್ಜಾದ ನಂತರ ಆಫ್ರಿಕದ ಮೊರ್ಯಾಕೋವನ್ನು ಕ್ರಿಕೆಟ್ ತಾಣವನ್ನಾಗಿ ಪರಿವರ್ತಿಸಲು ಶಾರ್ಜಾ ಮೂಲದ ಕ್ರಿಕೆಟರ್ಸ್ ಬೆನಿಫಿಟ್ ಫಂಡ್ ಸೀರೀಸ್ (ಸಿ ಬಿ ಎಫ್ ಎಸ್) ನಿರ್ಧರಿಸಿದ್ದು, ಮೊಹಿಂದರ್ ಇದರ ಉದ್ದೇಶ ಈಡೇರಿಸಲು ಟೊಂಕ ಕಟ್ಟಿ ನಿಂತಿದ್ದಾರೆ.
ಮೊಹಿಂದರ್ ಹಾಗೂ ಸುರಿಂದರ್ ಸಹೋದರರು ಒಂದು ವರ್ಷದಿಂದ ಸಿ ಬಿ ಎಫ್ ಎಸ್ ಜೊತೆ ಕ್ರಿಕೆಟ್ ಪ್ರಮೋಟರ್ಸ್ ಕೆಲಸ ಮಾಡುತ್ತಿದ್ದಾರೆ. ‘ಮೊಹಿಂದರ್ ನಮ್ಮ ಸಂಸ್ಥೆಗೆ ಸಂಯೋಜಕರಾಗಿ ಸೇರಿದ್ದಾರೆ. ಆಫ್ರಿಕದಲ್ಲಿ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಲು ಮುಖ್ಯ ಸಂಯೋಜನಾಧಿಕಾರಿ ಆಸಿಫ್ ಇಕ್ಬಾಲ್ ಜೊತೆಯಲ್ಲಿ ಅವರು ಕೆಲಸ ಮಾಡಲಿದ್ದಾರೆ. ಬರೋಡದ ಮಾಜಿ ಕ್ರಿಕೆಟಿಗ ಆಸಿಫ್ ಇಕ್ಬಾಲ್ ಪಿಚ್ ಸಿದ್ಧಪಡಿಸಲು ಸಹಾಯ ಮಾಡಲಿದ್ದಾರೆ’ ಎಂದು ಸಿ ಬಿ ಎಫ್ ಎಸ್ ಉಪಾಧ್ಯಕ್ಷ ಅಬ್ದುಲ್ ರೆಹ್ಮಾನ್ ಬಕ್ತರ್ ಹೇಳಿದ್ದಾರೆ.
ತಾವು ಮೊದಲು ಮೊರ್ಯಾಕೋಗೆ ಹೋದಾಗ ಅಲ್ಲಿನವರಿಗೆ ಕ್ರಿಕೆಟ್ ಅಂದರೆ ಏನೂ ಅಂತಲೇ ಗೊತ್ತಿರಲಿಲ್ಲ. ಆದರೆ ಈಗ ಸ್ಥಳೀಯ ಕ್ರಿಕೆಟ್ ಪಂದ್ಯಗಳನ್ನಾಡ್ತುತಿದ್ದಾರೆ. ಕ್ರಿಕೆಟ್ ಬಗೆಗೆ ಆಸಕ್ತಿ ಹೆಚ್ಚುತ್ತಿದೆ. ಕ್ಯಾಸಬ್ಲ್ಯಾಂಕ, ರಬತ್ ಮತ್ತು ಟ್ಯಾಂಗಿಯರ್ಸ್ ನಗರಗಳಲ್ಲಿ ಕ್ರಿಕೆಟ್ ವ್ಯಾಪಕವಾಗುತ್ತಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನಲ್ಲಿ ಮೊರ್ಯಾಕೋಗೆ ಸದಸ್ಯತ್ವ ಕಲ್ಪಿಸುವ ಯತ್ನ ಯಶಸ್ವಿಯಾಗುತ್ತಿದೆ ಎಂದು ಅಮರ್ನಾಥ್ ಸ್ಥಳೀಯ ಪತ್ರಿಕೆಯಾಂದಕ್ಕೆ ತಿಳಿಸಿದ್ದಾರೆ.
ಆಗ, ಪ್ರತಿ ವರ್ಷ ನಡೆಯುವ ಶಾರ್ಜಾ ಕಪ್ನಂತೆ ಮೊರ್ಯಾಕೋ ಕಪ್ ಕೂಡ ಶುರುವಾಗುತ್ತದೆ.
(ಐಎಎನ್ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications