ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಟ್ಟದ ಕಲ್ಲು ಕುರಿತ ಸ್ತಬ್ಧ ಚಿತ್ರಕ್ಕೆ ಬಹುಮಾನ
ಬಾಗಲಕೋಟೆ: ಮೈಸೂರು ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪಟ್ಟದ ಕಲ್ಲು ವಿರೂಪಾಕ್ಷ ದೇವಾಲಯದ ಸ್ತಬ್ಧ ಚಿತ್ರಕ್ಕೆ ರಾಜ್ಯ ಮಟ್ಟದ ದ್ವಿತೀಯ ಬಹುಮಾನ ದೊರೆತಿದೆ.
ಮೈಸೂರು ನಗರದ ನಿರಂತರ ಸಂಸ್ಥೆಯ ಕಲಾವಿದರು ಈ ಸ್ತಬ್ಧ ಚಿತ್ರವನ್ನು ನಿರ್ಮಿಸಿದ್ದರು. ಚಾಲುಕ್ಯರ ದೊರೆ ಎರಡನೇ ವಿಕ್ರಮಾದಿತ್ಯನ ರಾಣಿ ಲೋಕ ಮಹಾದೇವಿ ಕಟ್ಟಿಸಿರುವ ವಿರೂಪಾಕ್ಷ ದೇವಾಲಯದ ಕುರಿತ ಸ್ತಬ್ಧ ಚಿತ್ರ ಇದಾಗಿದ್ದು, ಚಿತ್ರ ನಿರ್ಮಿಸಿದ ಕಲಾವಿದರನ್ನು ಮತ್ತು ಜಿಲ್ಲಾ ಕನ್ನಡ ಸಂಸ್ಕೃತಿ ಸಹಾಯಕ ನಿರ್ದೇಶಕರನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ಅಭಿನಂದಿಸಿದೆ.
(ಇನ್ಫೋ ವಾರ್ತೆ)
Comments
Story first published: Friday, October 13, 2000, 5:30 [IST]