‘ಐಟಿ ವೃತ್ತಿಪರರೇ ನ್ಯೂಜಿಲೆಂಡಿಗೆ ಬನ್ನಿ - ನಮಗೆ 2000 ಜನ ಬೇಕು’
ಬೆಂಗಳೂರು : ಅಮೆರಿಕದತ್ತಲೇ ಮುಖ ಮಾಡಿರುವ ಭಾರತದ ಐಟಿ ತಂತ್ರಜ್ಞರನ್ನು ಆಕರ್ಷಿಸಲು ಜರ್ಮನಿ ಗ್ರೀನ್ಕಾರ್ಡ್ ಆಮಿಷ ಒಡ್ಡಿತು. ಪ್ರಯೋಜನವಾಗಲಿಲ್ಲ. ಈಗ ನ್ಯೂಜಿಲೆಂಡ್ 2 ಸಾವಿರ ಮಾಹಿತಿ ತಂತ್ರಜ್ಞರನ್ನು ನೇಮಿಸಿಕೊಳ್ಳಲು ದೇಶಾದ್ಯಂತ ಪ್ರದರ್ಶನ ನಡೆಸಿದೆ, ಅದೂ ಅಮೆರಿಕ ಎಚ್-1 ಬಿ ವೀಸಾ ಕೊಡುವ ಕಾಲ ಹತ್ತಿರವಿರುವಾಗ. ಇದು ಎಷ್ಟರ ಮಟ್ಟಿಗೆ ಕ್ಲಿಕ್ ಆಗುತ್ತದೆ ಅನ್ನೋದನ್ನ ನಮ್ಮ ಐಟಿ ಧುರೀಣರೇ ಹೇಳಬೇಕು.
ಇತ್ತೀ-ಚೆ-ಗೆ ನ್ಯೂಜಿಲೆಂಡ್ ಇಮ್ಮೈಗ್ರೇಷನ್ ಸರ್ವಿಸ್ (ಎನ್ ಝಡ್ ಐ ಎಸ್) ಐಟಿ ನುರಿತರನ್ನು ಸೆಳೆಯಲು ನಗರದಲ್ಲಿ ಪ್ರದರ್ಶನ ಕಾರ್ಯಕ್ರಮ ಆಯೋಜಿಸಿತ್ತು. ಪ್ರದರ್ಶನದ ನಂತರ ಸುದ್ದಿಗಾರರೊಡನೆ ಮಾತನಾಡಿದ ಎನ್ ಝಡ್ ಐ ಎಸ್ನ ಏಷ್ಯಾ ಹಾಗೂ ಮಿಡ್ಲ್ ಈಸ್ಟ್ ಪ್ರಾದೇಶಿಕ ನಿರ್ದೇಶಕ ಆ್ಯರನ್ ಬೇಕರ್, ನಾವು ಈ ವರ್ಷ 2000 ಐಟಿ ವೃತ್ತಿಪರರನ್ನು ಭರ್ತಿ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಮೂವ್ ಐಟಿ ಟು ನ್ಯೂಜಿಲೆಂಡ್ ಎಂಬ ವಿಚಾರ ಸಂಕಿರಣವನ್ನು ಹೈದರಾಬಾದ್ನಲ್ಲಿ ನಡೆಸಿ, ಈಗ ಬೆಂಗಳೂರಲ್ಲೂ ನಡೆಸುತ್ತಿದ್ದೇವೆ ಎಂದರು.
ನ್ಯೂಜಿಲೆಂಡಿನಲ್ಲೂ ಸುಮಾರು 1000 ಐಟಿ ಕಂಪನಿಗಳಿದ್ದು ಪ್ರತಿ ಕಂಪನಿಯಲ್ಲಿ 8ರಿಂದ 20 ತಜ್ಞ-ರು ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಸರ್ಕಾರ ವೃತ್ತಿಪರರನ್ನು ಪ್ರೋತ್ಸಾಹಿಸುವ ನೀತಿಗಳನ್ನು ರೂಪಿಸಿದೆ. ಲಕ್ಷಾಂತರ ರುಪಾಯಿ ಸಂಬಳ ಸಿಗಲಿದ್ದು , ಶಿಕ್ಷಕ ಮತ್ತಿತರ ವೃತ್ತಿ ಮಾಡುತ್ತಿರುವವರಿಗಿಂತ ದುಪ್ಪಟ್ಟಿದೆ. ಈವರೆಗೆ ನ್ಯೂಜಿಲೆಂಡಿಗೆ ವಲಸೆ ಬಂದಿರುವವರ ಸಂಖ್ಯೆ ಸರಾಸರಿ 38 ಸಾವಿರವಷ್ಟೆ. ಭಾರತದಲ್ಲಿ ಐಟಿ -ತ-ಜ್ಞ-ರು ಕಂಡಾಪಟ್ಟೆ ಸಿಗುತ್ತಾರೆಂಬ ಕಾರಣಕ್ಕೆ ಇಲ್ಲಿಗೆ ಬಂದಿದ್ದೇವೆ. ದೇಶಾದ್ಯಂತ ಇಂಥ ಪ್ರದರ್ಶನಗಳನ್ನು ನಡೆಸಿ, ಅವಕಾಶವನ್ನು ಮನವರಿಕೆ ಮಾಡಿಸಿ ನಮ್ಮ ದೇಶಕ್ಕೆ ಕೊಂಡೊಯ್ಯುತ್ತೇವೆ ಎಂದು ಬೇಕರ್ ಹೇಳಿದರು.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications