ಅಧಿಕಾರಕ್ಕಾಗಿ ಪಕ್ಷಗಳ ವಿಲೀನ ಕ್ಷುಲ್ಲಕ ರಾಜಕೀಯ : ಹೆಗಡೆ
ಬೆಂಗಳೂರು : ಅಧಿಕಾರಕ್ಕಾಗಿ ಮತ್ತೆ ಒಂದುಗೂಡುವುದು ಕ್ಷುಲ್ಲಕ ರಾಜಕೀಯ ಎಂದು ಹೇಳುವ ಮೂಲಕ ಜನತಾದಳ (ಯು) ನಾಯಕ ರಾಮಕೃಷ್ಣ ಹೆಗಡೆ ಅವರು, ದಳ ಬಣಗಳು ಒಂದುಗೂಡುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಇತ್ತ ಜೆ.ಎಚ್. ಪಟೇಲ್ ಅವರು, ಎರಡೂ ಬಣಗಳನ್ನು ಒಂದುಗೂಡಿಸಲು ಯತ್ನಿಸುತ್ತಿರುವಾಗ ಹೆಗಡೆಯವರ ಈ ಬಿರು ನುಡಿಗಳು ದಳ ಬಣಗಳ ವಿಲೀನದ ಕನಸು ನುಚ್ಚು ನೂರು ಮಾಡಿವೆ.
ಗುರುವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳದಲ್ಲಿ ಸಂಯುಕ್ತ ಜನತಾದಳ ವಿಲೀನವಾಗುವ ಸಾಧ್ಯತೆಯನ್ನು ಅಲ್ಲಗಳೆದರು. ಸಮಾಜದ ಒಳಿತಿಗಾಗಿ ಅಥವಾ ಜನತೆಯ ಹಿತಾಸಕ್ತಿಯ ರಕ್ಷಣೆಗೆ ಪಕ್ಷ ಒಂದಾಗುವುದರಲ್ಲಿ ಅರ್ಥವಿದೆ ಆದರೆ, ಸ್ವಾರ್ಥಕ್ಕಾಗಿ - ಅಧಿಕಾರಕ್ಕಾಗಿ ವಿಲೀನವಾಗುವುದು ಹೇಯ ರಾಜಕೀಯ ಎಂದರು.
ಎರಡೂ ಪಕ್ಷಗಳು ಒಂದಾಗುವ ಸಂದರ್ಭ ಈಗ ಬಂದಿಲ್ಲ. ಜನತಾದಳವನ್ನು ಕಟ್ಟಿ ಬೆಳೆಸಲು ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅದನ್ನು ಕೆಲವರು ಒಡೆದರು ಎಂದ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ಪಕ್ಷ ಕಟ್ಟಲು ಪಟ್ಟ ಶ್ರಮವನ್ನು ವಿವರಿಸಿದರು.
ಜನತಾದಳವನ್ನು ಆಗ ಒಡೆಯಲು ಯಾವುದೇ ಕಾರಣ ಇರಲಿಲ್ಲ. ಸ್ವಪ್ರತಿಷ್ಠೆಗಾಗಿ ಜಾತ್ಯತೀತ ಜನತಾದಳದ ಕೆಲವು ನಾಯಕರು ಈ ಕಾರ್ಯ ಮಾಡಿದರು ಎಂದು ತಮ್ಮ ನೆನಪುಗಳನ್ನು ಮೆಲುಕು ಹಾಕಿದರು. ಇಂದು ಜಾತ್ಯತೀತ ಜನತಾದಳದಲ್ಲಿರುವ ಶೇ.90 ಕಾರ್ಯಕರ್ತರು ಅವಿಭಜಿತ ಜನತಾದಳಕ್ಕೆ ಸೇರಿದವರಾಗಿದ್ದು, ಅವರು ತಮ್ಮ ಪಕ್ಷಕ್ಕೆ ಬರುವುದಾದರೆ, ಪಕ್ಷದ ಬಾಗಿಲು ತೆರೆದಿರುತ್ತದೆ ಎಂದರು.
ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ತಮ್ಮ ಪಕ್ಷ ಎನ್.ಡಿ.ಎ. ಯಾಂದಿಗೆ ಸಖ್ಯ ಕಳೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಎನ್ಡಿಎ ಸಂಬಂಧ ಕಡಿದುಕೊಂಡು ಬರುವಂತೆ ಜಾತ್ಯತೀತ ಜನತಾದಳ ನಾಯಕರು ಮಾಡುತ್ತಿರುವ ಸಲಹೆಗೆ ಉತ್ತರಿಸಿದ ಹೆಗಡೆ, ಅವರ ನಿಲುವು ಹಾಗಿದ್ದಲ್ಲಿ ವಿಲೀನದ ಬಗ್ಗೆ ಅವರು ಮಾತನಾಡುವ ಅಗತ್ಯವೇ ಇಲ್ಲ ಎಂದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications