ಹೈದರಾಬಾದ್ನಲ್ಲಿ ಎಚ್ಎಸ್ಬಿಸಿ ಜಾಗತಿಕ ಸೇವಾ ಕೇಂದ್ರ
ಹೈದರಾಬಾದ್ : ಹಾಂಗ್ಕಾಂಗ್ ಅಂಡ್ ಶಾಂಘೖ ಬ್ಯಾಂಕಿಂಗ್ ಕಾರ್ಪೋರೇಷನ್ (ಎಚ್ಎಸ್ಬಿಸಿ) ತನ್ನ ಎರಡನೇ ಜಾಗತಿಕ ವಿದ್ಯುನ್ಮಾನ ಪರಿಷ್ಕರಣ ( ಎಲೆಕ್ಟ್ರಾನಿಕ್ ಪ್ರೊಸೆಸಿಂಗ್) ಸೇವಾ ಕೇಂದ್ರವನ್ನು ಭಾರತದಲ್ಲಿ ತೆರೆದಿದೆ. ಭಾರತದ ಈ ಕೇಂದ್ರವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಸೋಮವಾರ ಹೈದರಾಬಾದ್ನಲ್ಲಿ ಉದ್ಘಾಟಿಸಿದರು.
ಭಾರತದಲ್ಲಿ ಆರಂಭಗೊಂಡ ಈ ಪ್ರಪ್ರಥಮ ಕೇಂದ್ರವನ್ನು ಹೈಟೆಕ್ ಸಿಟಿಯಲ್ಲಿ ಸ್ಥಾಪಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಎಚ್ಎಸ್ಬಿಸಿಯ ಚೀಫ್ ಎಕ್ಸಿಕ್ಯೂಟಿವ್ ಕೀತ್ ವಿಟ್ಸನ್ ಅವರು, ಬ್ಯಾಂಕ್ ವಿಶ್ವದಲ್ಲಿ ಕೇವಲ ಎರಡು ಸೇವಾ ಕೇಂದ್ರಗಳನ್ನು ಹೊಂದಿದ್ದು, ಎರಡನೇ ಕೇಂದ್ರವನ್ನು ಇಲ್ಲಿ ಆರಂಭಿಸಿದೆ, ಮೊದಲ ಸೇವಾ ಕೇಂದ್ರ ಚೀನಾದಲ್ಲಿದೆ ಎಂದು ವಿವರಿಸಿದರು.
ಆರಂಭಿಕವಾಗಿ ಪ್ರಥಮ ಹಂತದಲ್ಲಿ ಬ್ಯಾಂಕ್ನಲ್ಲಿ ಮೂರು ಮಿಲಿಯನ್ ಡಾಲರ್ ಹಣ ತೊಡಗಿಸಲಾಗಿದ್ದು, ಉತ್ತರರೋತ್ತರದಲ್ಲಿ ಬ್ಯಾಂಕ್ ಕೇಂದ್ರವನ್ನು ಅಭಿವೃದ್ಧಿಪಡಿಸುವ ಯೋಜನೆ ಇದೆ ಎಂದು ಅವರು ಹೇಳಿದರು. ಈ ಕೇಂದ್ರದಲ್ಲಿ ಸುಮಾರು 200 ಮಾಹಿತಿ ತಂತ್ರಜ್ಞಾನ (ಐಟಿ) ಪರಿಣತರು ಸೇವೆ ಸಲ್ಲಿಸಲಿದ್ದು, ದಿನನಿತ್ಯವೂ 10 ಸಾವಿರ ವಹಿವಾಟು ನಡೆಯಲಿದೆ ಎಂದು ಹೇಳಿದರು.
ಪ್ರಾರಂಭದಲ್ಲಿ ಹೈದರಾಬಾದ್ನಲ್ಲಿರುವ ಈ ಕೇಂದ್ರವು ಬ್ರಿಟನ್, ಮಿಡ್ಲ್ ಈಸ್ಟ್, ಏಷ್ಯಾ ಪೆಸಿಫಿಕ್ ಮತ್ತು ಅಮೆರಿಕ ಎಚ್ಎಸ್ಬಿಸಿಯ ಅಂಗಸಂಸ್ಥೆಗಳ ಕಚೇರಿಯ ಕಾರ್ಯವನ್ನೂ ನೋಡಿಕೊಳ್ಳಲಿದೆ. ಚೀನಾದಲ್ಲಿರುವ ಕೇಂದ್ರವು ಹಾಂಕಾಂಗ್ ಹಾಗೂ ಬ್ರಿಟನ್ನ ವಹಿವಾಟನ್ನು ಮಾತ್ರ ನಿರ್ವಹಿಸುತ್ತಿದೆ.
ಹೈದರಾಬಾದ್ನಲ್ಲಿ ಮಾಹಿತಿ ತಂತ್ರಜ್ಞಾನದ ಕುಶಲಿಗಳ ಲಭ್ಯತೆ ಹಾಗೂ ಇಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಇರುವ ಪ್ರೋತ್ಸಾಹದ ಹಿನ್ನೆಲೆಯಲ್ಲಿ ಸೇವಾಕೇಂದ್ರವನ್ನು ತೆರೆಯಲಾಯಿತು ಎಂದು ವಿಟ್ಸನ್ ಹೇಳಿದರು. ತಮ್ಮ ಸಂಸ್ಥೆಯು ವಿಮಾ ವಲಯಕ್ಕೂ ಕಾಲಿಡುವ ಬಗ್ಗೆ ಚಿಂತಿಸುತ್ತಿದೆ ಎಂದೂ ಹೇಳಿದರು. (ಐಎಎನ್ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications