ಹುಬ್ಬಳ್ಳಿ ಬಳಿಯ 2 ಪೆಟ್ರೋಲ್ ಬಂಕ್ ದರೋಡೆ
ಹುಬ್ಬಳ್ಳಿ : ಪೂನಾ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅದರಗುಂಚಿ ಗ್ರಾಮದ ಬಳಿ ಭಾನುವಾರ ನಸುಕಿನಲ್ಲಿ ಎರಡು ಪೆಟ್ರೋಲ್ ಬಂಕ್ಗಳ ಮೇಲೆ ಆಕ್ರಮಣ ಮಾಡಿರುವ ದರೋಡೆಕೋರರ ತಂಡ 31 ಸಾವಿರ ರುಪಾಯಿ ನಗದು ದೋಚಿ ಪರಾರಿಯಾಗಿರುವುದೇ ಅಲ್ಲದೆ, ಬಂಕ್ ಕೆಲಸಗಾರನ ಮೇಲೆ ಗುಂಡು ಹಾರಿಸಿ ತೀವ್ರವಾಗಿ ಗಾಯಗೊಳಿಸಿದೆ.
ಭಾನುವಾರ ಬೆಳಗಿನ ಜಾವ 4.30ರ ಸಮಯದಲ್ಲಿ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣಿ ವ್ಯಾಪ್ತಿಗೆ ಸೇರುವ ಎರಡು ಪೆಟ್ರೋಲ್ ಬಂಕ್ಗಳ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳು, ಇಬ್ಬರನ್ನು ಹೊಲದಲ್ಲಿ ಕಟ್ಟಿಹಾಕಿ ಹಣ ದೋಚಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ ಶಿವಕುಮಾರ ಹಿರೇಮಠ ಅವರನ್ನು ಇಲ್ಲಿನ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಅದರಗಂಚಿಯ ನೇಹಾ ಪೆಟ್ರೆಲ್ ಬಂಕ್ ಹಾಗೂ ಸಮೀಪವೇ ಇರುವ ಟೆಲ್ಕೋ ಬಳಿಯ ಮತ್ತೊಂದು ಪೆಟ್ರೋಲ್ ಬಂಕ್ನಲ್ಲಿ ಈ ದರೋಡೆ ನಡೆದಿದೆ. ಧಾರವಾಡದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮುಂದಿನ ಕ್ರಮಕ್ಕೆ ಆದೇಶಿಸಿದ್ದಾರೆ. ದರೋಡೆಕೋರರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ.