ಪೊಲೀಸರಿಗೆ ಬೈದ ಮಾವುತ, ಬಲರಾಮನಿಗೆ ಭಲಾ ಎಂದ
ಮೈಸೂರು :ಮೂರನೇ ಬಾರಿಗೆ 750 ಕೆ.ಜಿ. ತೂಕದ ಚಿನ್ನದಂಬಾರಿಯ ಹೊತ್ತು ಸೊಗಸಾಗಿ ಹಾಗೂ ಶಿಸ್ತಿನಿಂದ ಕಾರ್ಯ ನಿರ್ವಹಿಸಿದ ಬಲರಾಮನಿಗೆ ಶಹಬಾಸ್ ಹೇಳಿದ ಮಾವುತ, ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ರೊಚ್ಚಿಗೆದ್ದ ಘಟನೆ ಭಾನುವಾರ ನಡೆಯಿತು.
ದಸರಾ ಮೆರವಣಿಗೆಯ ಸಮಯದಲ್ಲಿ ಅಂಬಾರಿಯನ್ನು ಹೊತ್ತು ಬಂದ ಬಲರಾಮ, ಆರಮನೆ ಆವರಣದಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಅಂಬಾರಿಯ ಮೇಲಿದ್ದ ಚಾಮುಂಡಾಂಬಿಕೆಗೆ ಪುಷ್ಪಾರ್ಚನೆ ಮಾಡಲು ಏರಿದ್ದ ವೇದಿಕೆಯ ಬಳಿ ಬಂದು ಶಿಸ್ತಿನಿಂದ ನಿಂತು, ಸೊಂಡಿಲೆತ್ತಿ ಮುಖ್ಯಮಂತ್ರಿಗಳಿಗೆ ವಿಧೇಯತೆಯಿಂದ ನಮಸ್ಕರಿಸಿದಾಗ, ತನ್ನ ಆನೆಯ ಶಿಸ್ತು ಪಾಲನೆಯನ್ನು ಮೆಚ್ಚಿದ ಮಾವುತ ಆನೆಯ ಕಿವಿ ಸವರುತ್ತಾ, ಭಲಾ ಬಲರಾಮ, ಶಬಾಷ್ ಕಲ ಶಬಾಷ್ ಎಂದು ಉದ್ಗರಿಸಿದ.
ಮುಖ್ಯಮಂತ್ರಿಗಳು ಚಾಮುಂಡಾಂಬಿಕೆಯನ್ನು ಪೂಜಿಸುವಾಗ ಅವರ ರಕ್ಷಣೆಗೆ ಬಂದ ಪೊಲೀಸರ ಹಿಂಡು ಹಾಗೂ ಮುಖ್ಯಮಂತ್ರಿಗಳ ಹತ್ತಿರವೇ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಅಂಬಾರಿಯ ಹೊತ್ತ ಆನೆಗೆ ಮಿಸುಕಾಡಲೂ ಜಾಗ ಇಲ್ಲದಂತೆ ಆನೆಯ ಸುತ್ತಾ ಗುಂಪು ಕೂಡಿ ಕಸಿವಿಸಿ ಉಂಟು ಮಾಡಿದಾಗ, ಬಲರಾಮ ನಿಂತಲ್ಲೇ ಅಲುಗಾಡಿದ್ದರಿಂದ ಬೇಸತ್ತ ಮಾವುತ ಹೀಂಗಾದ್ರ ಹ್ಯಾಂಗ ಮಾಡೋದು, ಆನೆಗೂ ಕಾಲಿಡಲು ಸ್ವಲ್ಪ ಜಾಗ ಕೊಡಿ ಎಂದು ಕಿರುಚಿದ. ಪೊಲೀಸರ ಮೇಲೂ ಸಿಟ್ಟಿಗೆದ್ದ.
ಮಾವುತನ ಆರ್ಭಟಕ್ಕೆ ಮುಖ್ಯಮಂತ್ರಿಗಳೂ ಸೇರಿದಂತೆ ಎಲ್ಲರೂ ಗೊಳ್ಳೆಂದು ನಕ್ಕರು. ಆನಂತರ ತಪ್ಪಿನ ಅರಿವಾದ ಪೊಲೀಸರು ಜನರನ್ನು ದೂರಕಳಿಸಿ, ಬಲರಾಮನಿಗೆ ಅಡಿ ಇಡಲು ಅವಕಾಶ ಮಾಡಿಕೊಟ್ಟರು. ಪೂಜೆಯ ನಂತರ ಗಜ ಗಾಂಭೀರ್ಯದಿಂದ ಬಲರಾಮ ತನಗೆ ವಹಿಸಿದ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿದ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications