ಪುಟಿನ್ ಭೇಟಿಯಲ್ಲಿ ಭಾರತ- ರಷ್ಯಾ ದಾಖಲೆ ಒಡಂಬಡಿಕೆ
ನವದೆಹಲಿ : ಭಾರತ ಮತ್ತು ರಷ್ಯಾ 17 ಒಡಂಬಡಿಕೆಗಳಿಗೆ ಸಹಿ ಮಾಡಿದ್ದು, ಈ ಹಿಂದೆ ಯಾವುದೇ ರಾಷ್ಟ್ರದ ಅಧ್ಯಕ್ಷರ ಭೇಟಿಯಲ್ಲಿ ಇಷ್ಟೊಂದು ಒಡಂಬಡಿಕೆಗಳಾಗಿರಲಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರ ಈ ದಾಖಲೆಗೆ ಕಾರಣರಾಗಿದ್ದಾರೆ.
ವಿವಿಧ ಕ್ಷೇತ್ರಗಳ ಕಾರ್ಯತಂತ್ರಗಳಿಗೆ ಸಂಬಂಧಿಸಿದಂತೆ ಮಂಗಳವಾರ 12 ಒಪ್ಪಂದಗಳಿಗೆ ಎರಡೂ ರಾಷ್ಟ್ರಗಳು ಸಹಿ ಹಾಕಿದ್ದವು. ಬುಧವಾರ ಒಡಂಬಡಿಕೆಗಳ ಯಾದಿಗೆ ಇನ್ನೂ 5 ಹೊಸ ಒಪ್ಪಂದಗಳು ಸೇರಿದವು. ಎಲ್ಲಾ ಒಡಂಬಡಿಕೆ ಪತ್ರಗಳಿಗೆ ಸಹಿ ಹಾಕಿದ ನಂತರ ವಿಶ್ವದ ಅದ್ಭುತ ಆಗ್ರಾದ ತಾಜ್ಮಹಲ್ ನೋಡಲು ಪುಟಿನ್ ತೆರಳಿದರು.
ರಕ್ಷಣಾ ತಂತ್ರಜ್ಞಾನ ಕುರಿತಂತೆ ಭಾರತ ಹಾಗೂ ರಷ್ಯಾ 300 ಕೋಟಿ ಡಾಲರ್ಗಳ ವಹಿವಾಟಿನ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಡಂಬಡಿಕೆಯಿಂದ ರಷ್ಯಾದ 310ಟಿ- 90 ಟ್ಯಾಂಕ್ಗಳು, ಕೆರಿಯರ್ ಅಡ್ಮಿರಲ್ ಗೋರ್ಶ್ಕೋವ್ ವಿಮಾನ ಭಾರತಕ್ಕೆ ದೊರೆಯಲಿವೆ. ಜೊತೆಗೆ 140ಎಸ್ಯು- 30 ಕಾಂಬ್ಯಾಟ್ ವಿಮಾನದ ಉತ್ಪಾದನೆಗೆ ಪರವಾನಗಿಯೂ ದೊರೆತಿದೆ. ಉಳಿದಂತೆ ವಿಜ್ಞಾನ, ತಂತ್ರಜ್ಞಾನ, ಕೃಷಿ, ಅಂಚೆ ಸಂವಹನಗಳಿಗೆ ಸಂಬಂಧಿಸಿದಂತೆ ಒಡಂಬಡಿಕೆಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಿದವು.
ಕಾಶ್ಮೀರ ಸಮಸ್ಯೆ- ಸಂಧಾನವೇ ಸೂಕ್ತ : ಇದಕ್ಕೂ ಮುನ್ನ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, ಜಮ್ಮು- ಕಾಶ್ಮೀರ ವಿಷಯದಲ್ಲಿ ವಿದೇಶೀ ಹಸ್ತಕ್ಷೇಪ ಕೂಡದು ಎಂಬ ಭಾರತದ ನಿಲುವನ್ನು ಸಮರ್ಥಿಸಿದರು. ಹದಗೆಟ್ಟಿರುವ ಭಾರತ- ಪಾಕಿಸ್ತಾನಗಳ ಸಂಬಂಧ ಸುಧಾರಣೆಗೆ ಸಂಧಾನವೇ ಸೂಕ್ತ ಮಾರ್ಗ ಎಂದು ಹೇಳಿದರು.
(ಐಎಎನ್ಎಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications