ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಂಗೂಬಾಯಿ ಹಾನಗಲ್ ಕುರಿತ ಸಾಕ್ಷ್ಯಚಿತ್ರ ಬಿಡು-ಗ-ಡೆ
ಹುಬ್ಬಳ್ಳಿ : - ಪ್ರಸಿ-ದ್ಧ ಹಿಂದೂಸ್ತಾನೀ ಸಂಗೀತ ವಿದುಷಿ ಡಾ. ಗಂಗೂಬಾಯಿ ಹಾನಗಲ್ ಅವರ ಕುರಿತ 15 ನಿಮಿಷಗಳ ಸಾಕ್ಷ್ಯಚಿತ್ರ ಸ್ವರ ಕೇಸರಿಯನ್ನು ರಾಜ್ಯ ವಾರ್ತಾ ಮತ್ತು ಪ್ರಸಾರ ಇಲಾಖೆ ಬುಧವಾರ ಬಿಡುಗಡೆ ಮಾಡಿದೆ.
ರಾಜ್ಯಕ್ಕೆ ಕೀರ್ತಿ ತಂದುಕೊಟ್ಟಿರುವ ವ್ಯಕ್ತಿಗಳ ಸಾಕ್ಷ್ಯ ಚಿತ್ರ ನಿರ್ಮಿಸುವ ಯೋಜನೆಯನ್ನು ಇಲಾಖೆ ರೂಪಿಸಿದ್ದು, ಈ ಚಿತ್ರಗಳನ್ನು ವೀಡಿಯೋಕ್ಕೆ ಪರಿವರ್ತಿಸಿ, ಪ್ರತಿ ಭಾನುವಾರ ಮಧ್ಯಾಹ್ನ ಒಂದು ಗಂಟೆಗೆ ದೂರದರ್ಶನದ ಕರ್ನಾಟಕ ತರಂಗಿಣಿ ಎಂಬ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಗುವುದು.
ಅಲ್ಲದೆ ಪ್ರತಿ ಜಿಲ್ಲಾ ವಾರ್ತಾ ಕಚೇರಿಯಲ್ಲಿಯೂ ವೀಡಿಯೋ ಪ್ರದರ್ಶನ ಘಟಕದ ಮೂಲಕ ಹಳ್ಳಿಗಳಲ್ಲಿ ಈ ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಇಲಾಖೆ ಕರ್ನಾಟಕದ ಆದರ್ಶ ವ್ಯಕ್ತಿಗಳ ಬಗ್ಗೆ ತಯಾರಿಸುವ ಸಾಕ್ಷ್ಯ ಚಿತ್ರಗಳನ್ನು ಮುಂಬಯಿ ಮತ್ತು ನೇಪಾಳಗಳಲ್ಲಿ ನಡೆಯುವ ಕಿರುಚಿತ್ರೋತ್ಸವಗಳಲ್ಲಿಯೂ ಪ್ರದರ್ಶಿಸಲಾಗುವುದು.
(ಇನ್ಫೋ ವಾರ್ತೆ)
Comments
Story first published: Thursday, October 5, 2000, 5:30 [IST]