ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಶ್ವ ವಿಖ್ಯಾತ ಜಂಬೂಸವಾರಿ ನಡೆಯೋದುಗ್ಯಾರಂಟಿ: ವಿಶ್ವನಾಥ್
ಮೈಸೂರು : ರಾಜ್ಕುಮಾರ್ ಅಪಹರಣ ಹಿನ್ನೆಲೆಯಲ್ಲಿ ದಸರಾ ಮೆರವಣಿಗೆ ನಡೆಯುತ್ತದೋ ಇಲ್ಲವೋ ಎಂಬ ಅನಿಶ್ಚಿತತೆಗೆ ಕೊನೆಗೂ ತೆರೆ ಬಿದ್ದಿದೆ. ವಿಶ್ವ ವಿಖ್ಯಾತ ಜಂಬೂ ಸವಾರಿ ನಡೆಯುವುದು ಈಗ ನೂರಕ್ಕೆ ನೂರು ಸ್ಥಿರಪಟ್ಟಿದೆ.
ಬುಧವಾರ ರಾಜ್ಯ ಸರಕಾರ ದಸರಾ ಮೆರವಣಿಗೆಗೆ ತನ್ನ ಹಸಿರು ನಿಶಾನೆ ತೋರಿದೆ. ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರೇ ಅ. 8 ರಂದು ನಡೆಯುವ ಮೆರವಣಿಗೆಗೆ ಅರಮನೆಯ ಮುಂದೆ ಧ್ವಜ ಹಾರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಈ ವಿಷಯವನ್ನು ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎಚ್. ವಿಶ್ವನಾಥ್ ಇಂದಿಲ್ಲಿ ತಿಳಿಸಿದರು.
ಬೆಳಕಿನ ಹಬ್ಬವನ್ನೂ ನಾಚಿಸುವಂತೆ ಸಿಡಿಮದ್ದುಗಳ ಪ್ರದರ್ಶನದ ಸಂಭ್ರಮದೊಂದಿಗೆ ನಡೆಯುತ್ತಿದ್ದ ದಸರೆ ಮೆರವಣಿಗೆಯಲ್ಲಿ ಈಬಾರಿ ಸಿಡಿಮದ್ದಿನ ಪ್ರದರ್ಶನ ರದ್ದು ಪಡಿಸಲಾಗಿದೆ. ಆದರೆ, ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ದಸರೆ ಮೆರವಣಿಗೆ ಯಾವುದೇ ಅಡೆತಡೆ ಇಲ್ಲದೆ ಜರುಗುತ್ತದೆ ಎಂದು ಸಚಿವರು ಹೇಳಿದ್ದಾರೆ. ( ಮೈಸೂರು ಪ್ರತಿನಿಧಿಯಿಂದ)
Comments
Story first published: Wednesday, October 4, 2000, 5:30 [IST]