Get Updates
Get notified of breaking news, exclusive insights, and must-see stories!

28ರ ಕರ್ನಾಟಕ ಬಂದ್‌ಗೆ ಸರ್ವತ್ರ ಬೆಂಬಲ, ಸಾರಿಗೆ ಸ್ತಬ್ಧ ಸಂಭವ

ಬೆಂಗಳೂರು : ರಾಜ್‌ಕುಮಾರ್‌ ಬಿಡುಗಡೆಗೆ ಒತ್ತಾಯಿಸಿ 28 ರಂದು ನಡೆಸಲುದ್ದೇಶಿಸಿರುವ ಕರ್ನಾಟಕ ಬಂದ್‌ಗೆ ಸರ್ವತ್ರ ಬೆಂಬಲ ವ್ಯಕ್ತವಾಗಿದೆ. ಈ ಮಧ್ಯೆ ರಾಜ್ಯ ಗೃಹ ಸಚಿವರು, ಬಂದ್‌ಗಿದು ಸಕಾಲವಲ್ಲ, ಬಂದ್‌ ನಿರ್ಧಾರ ಕೈಬಿಡಿ ಎಂದು ಪದೇ ಪದೇ ಮನವಿ ಮಾಡುತ್ತಲೇ ಇದ್ದಾರೆ.

ಯಾರು ಏನೇ ಹೇಳಿದರೂ, ಬಂದ್‌ ನಡೆಯುವುದು ಖಚಿತ ಎಂದು ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಸ್ಪಷ್ಟ ನುಡಿಗಳಲ್ಲಿ ತಿಳಿಸಿಬಿಟ್ಟಿದೆ. ಬಂದ್‌ ನಡೆಯುವುದು ಖಚಿತ ಎಂದು ಗೊತ್ತಾದ ಮೇಲಂತೂ ಸರಕಾರ ಸಾರಿಗೆ ವಾಹನಗಳ ಸಂಚಾರ ಸ್ತಬ್ಧಗೊಳಿಸುವ ಹಾಗೂ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸುವ ಬಗ್ಗೆ ಚಿಂತಿಸುತ್ತಿದೆ.

ಬೆಂಬಲ : ಬೆಂಗಳೂರು ಆಟೋ ಚಾಲಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ, ಬೆಂಗಳೂರು ಹೊಟೆಲ್‌ ಮಾಲಿಕರ ಸಂಘ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಬಳಗ, ವಾಟಾಳ್‌ ನಾಗರಾಜ್‌, ಕನ್ನಡ ಚಳವಳಿ ಕೇಂದ್ರ ಸಮಿತಿ, ರಾಜ್ಯದ ಹಲವು ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಇದನ್ನು ಸ್ವಾಭಿಮಾನದ ಬಂದ್‌ ಎಂದು ಬಣ್ಣಿಸಿ, ದಲಿತ ಸಂಘರ್ಷ ಸಮಿತಿ ಬೆಂಬಲ ವ್ಯಕ್ತಪಡಿಸಿದೆ.

ಕರ್ನಾಟಕ ಟೆಲಿವಿಷನ್‌ ನಿರ್ಮಾಪಕರು ಮತ್ತು ನಿರ್ದೇಶಕರ ಸಂಘ ತನ್ನ ಬೆಂಬಲ ವ್ಯಕ್ತ ಪಡಿಸಿದೆ. ಬಂದ್‌ ದಿನ ಆಟೋ ಓಡಿಸದಿರಲು ಎಲ್ಲ ಚಾಲಕರಿಗೂ ಸಂಘದ ಅಧ್ಯಕ್ಷ ಸೋಮಶೇಖರ್‌ ಮನವಿ ಮಾಡಿದ್ದಾರೆ. ಹೊಟೆಲ್‌ಗಳನ್ನು ಬಂದ್‌ ಮಾಡುವಂತೆ ಹೊಟೆಲ್‌ಗಳ ಸಂಘದ ಅಧ್ಯಕ್ಷ ಬಿ. ಚಂದ್ರಶೇಖರ ಹೆಬ್ಬಾರ್‌ ಪ್ರಾರ್ಥಿಸಿದ್ದಾರೆ.

ಸಾರ್ವಜನಿಕರ ಆಸ್ತಿ ಪಾಸ್ತಿಗೆ ಹಾನಿ ಉಂಟು ಮಾಡದಂತೆ ಕೋರಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ ಬಂದ್‌ಗೆ ಬೆಂಬಲ ನೀಡಿದೆ. ರವಿಚಂದ್ರನ್‌ ಅಭಿಮಾನಿಗಳ ಸಂಘ, ಬಿಎಚ್‌ಇಎಲ್‌ ಕನ್ನಡ ಸಂಘ, ಬಿಇಎಂಎಲ್‌ ಕನ್ನಡ ಸಂಘವೇ ಮುಂತಾದ ಸಾವಿರಾರು ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+