ರೈತರಿಗೆ ವಿದೇಶೀ ಬಿತ್ತನೆ ಬೀಜ ದೊರಕಿಸಲು ಕೇಂದ್ರ ಬದ್ಧ- ಪರೋಡ
ಬೆಂಗಳೂರು : ಕೇಂದ್ರ ಸರ್ಕಾರ ಸದ್ಯದಲ್ಲೇ ಬೀಜನೀತಿ (ಸೀಡ್ ಪಾಲಿಸಿ) ಯನ್ನು ಪುನರ್ ಪರಾಮರ್ಶಿಸಲಿದ್ದು, ಬಿತ್ತನೆ ಬೀಜಗಳ ಆಮದಿಗೆ ಈಗ ಇರುವ ಅಡೆತಡೆಗಳೆಲ್ಲಾ ತೊಡೆದು ಹೋಗಲಿವೆ ಎಂದು ಭಾರತೀಯ ಕೃಷಿ ಸಂಶೋಧನಾ ಸಮಿತಿ (ಐ.ಸಿ.ಎ.ಆರ್) ಯ ಡೈರೆಕ್ಟರ್ ಜನರಲ್ ಆರ್.ಎಸ್. ಪರೋಡ ಮಂಗಳವಾರ ತಿಳಿಸಿದ್ದಾರೆ.
ಏಕ ಗವಾಕ್ಷಿ ಮಂಜೂರಾತಿ, ಹೊಸ ದಿಗ್ಬಂಧನ -ಪ--ದ್ಧ-ತಿ ಹಾಗೂ ಸೂಕ್ತ ರೀತಿಯ ಪರಿಶೀಲನಾ ಪದ್ಧತಿಗಳನ್ನು ಸದ್ಯದಲ್ಲೇ ಜಾರಿಗೆ ತರಲಾಗುವುದು. ಇದರಿಂದ ಬಿತ್ತನೆ ಬೀಜಗಳ ಆಮದು ಕುರಿತ ಗೊಂದಲ ಬಗೆಹರಿಯಲಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಇಂಥ ನೀತಿಯನ್ನು ಭಾರತವೇ ಮೊದಲು ಜಾರಿಗೆ ತರುತ್ತಿರುವುದು ಎಂದು ನಗರದಲ್ಲಿ ನಡೆದ ಸೀಡ್ 2000 ಸಮಾವೇಶದ ಚರ್ಚೆಯಲ್ಲಿ ಪರೋಡ ಸುದ್ದಿಗಾರರಿಗೆ ಹೇಳಿದರು.
ಐ.ಸಿ.ಎ.ಆರ್ನ ಮಾಜಿ ಡೈರೆಕ್ಟರ್ ಜನರಲ್ ಎಂ.ವಿ. ರಾವ್ ನೈತೃತ್ವದ ಸಮಿತಿ ಬೀಜನೀತಿಯ ಪುನರ್ ಪರಾಮರ್ಶೆಗೆ ಸೂಕ್ತ ನಿರ್ದೇಶನಗಳನ್ನು ನೀಡಿದೆ. ನಿರ್ದೇಶನಗಳನ್ನು ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಿ, ಜಾರಿಗೆ ತರಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು ಎಂದರು.
ಸಸ್ಯ ವೈವಿಧ್ಯತೆ ರಕ್ಷಣೆ ಮತ್ತು ರೈತರ ಹಕ್ಕು ಮಸೂದೆಯನ್ನು ನವೆಂಬರ್ ತಿಂಗಳಲ್ಲಿ ಸಂಸತ್ತಿನಲ್ಲಿ ಜಾರಿಗೆ ತರಲಾಗುವುದು. ಸಾಹಿಬ್ ಸಿಂಗ್ ವರ್ಮ ನೇತೃತ್ವದ ಜಂಟಿ ಆಯ್ಕೆ ಸಮಿತಿ ಮಸೂದೆಯಲ್ಲಿ ಕೆಲ ಅಂಶಗಳನ್ನು ಸೇರಿಸುವಂತೆ ಈಗಾಗಲೇ ಶಿಫಾರಸ್ಸು ಮಾಡಿದೆ ಎಂದು ತಿಳಿಸಿದರು.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications