ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡ-ಲ ಕೊರೆ-ತ-ದ ಉಳ್ಳಾ-ಲ-ದ ಅಭಿ-ವೃ-ದ್ಧಿ-ಗೆ 2.39 ಕೋಟಿ ಬಿಡು-ಗ-ಡೆ

By Staff
|
Google Oneindia Kannada News

ಉಳ್ಳಾಲ : ಉಳ್ಳಾಲದ ಅಭಿವೃದ್ಧಿಗಾಗಿ ಸರಕಾರ 2.39 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಗುರುವಾರ ಉಳ್ಳಾಲದ ಶಾಸ-ಕ ಯು.ಟಿ. ಫರೀದ್‌ ಹೇಳಿದ್ದಾರೆ.

ಉಳ್ಳಾಲದ ಕಡಲು ಕೊರೆತ ಸಮಸ್ಯೆಗೆ ಬ್ರೇಕ್‌ ವಾಟರ್‌ ತಡೆ ಗೋಡೆ ನಿರ್ಮಾಣ ಸೂಕ್ತವೆಂದು ಪರಿಗಣಿಸಿದ್ದು, ಈ ಹಣವನ್ನು ತಡೆಗೋಡೆ ಕಾಮಗಾರಿಗೂ ಬಳಸಲಾಗುವುದು ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಕಡಲು ಕೊರೆತದಿಂದ ನಿರ್ವಸಿತರಾದ 21 ಕುಟುಂಬಗಳಿಗೆ ಮರು ವಸತಿ ಒದಗಿಸಲಾಗುವುದು, ಅದಕ್ಕಾಗಿ ಸ್ಥಳ ಗುರುತಿಸುವ ಕಾರ್ಯ ಈಗಾಗಲೇ ನಡೆದಿದೆ. ಕುಡಿಯುವ ನೀರು, ಗ್ರಾಮಾಂತರ ಪ್ರದೇಶದ ರಸ್ತೆ ದುರಸ್ತಿ, ಕಡಲು ಕೊರೆತ ಮತ್ತು ವಿದ್ಯುತ್‌ ಸಮಸ್ಯೆಗಳ ನಿವಾರಣೆಗೆ ಈ ಹಣವನ್ನು ಬಳಸಲಾಗುವುದು ಎಂದ ಫರೀದ್‌, ಉಳ್ಳಾಲ ಮತ್ತು ಕೋಣಾಜೆಯಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಅಪ್‌ ಗ್ರೇಡ್‌ ಮಾಡುವುದರಿಂದ ಶೇ 75ರಷ್ಟು ವಿದ್ಯುತ್‌ ವೈಫಲ್ಯ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.

ಬೆಂಗರೆ ವಾಸಿಗಳು ದೋಣಿ ದಾಟಿ , ನ್ಯಾಯಬೆಲೆ ಅಂಗಡಿಗೆ ಬಂದು ಪಡಿತರ ಸಾಮಾನು ಕೊಳ್ಳುವುದು ತ್ರಾಸದಾಯಕವಾದ್ದರಿಂದ ಬೆಂಗರೆಯಲ್ಲಿ ಹೊಸ ಪಡಿತರ ಕೇಂದ್ರವನ್ನು ತೆರೆಯಲಾಗುವುದು ಎಂದರು. ಗ್ರಾಮಾಂತರ ಸಾರಿಗೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೋಣಾಜೆ-ನಾಡು ಪದವು, ಪಾವೂರು-ಹರೇಕಳ, ಪಾವೂರು- ಇನೋಳಿ , ರಾಣಿಪುರ-ಯಲ್ಯರ ಪದವು ಮಾರ್ಗಗಳಿಗೆ ಒಟ್ಟು ಎಂಟು ಬಸ್‌ಗಳನ್ನು ಹಾಕಲಾಗುವುದು ಎಂದೂ ಫರೀದ್‌ ಹೇಳಿದರು.

(C®æ–À ÊÝÑæì)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X