Get Updates
Get notified of breaking news, exclusive insights, and must-see stories!

ವಿಶ್ವ ವಾಣಿಜ್ಯ ಒಪ್ಪಂದದ ಅಪಾಯದ ಬಗ್ಗೆ ಜನಜಾಗೃತಿ

ಮಂಡ್ಯ : ವಿಶ್ವವಾಣಿಜ್ಯ ಒಪ್ಪಂದ ಹಾಗೂ ಮುಕ್ತ ಮಾರುಕಟ್ಟೆ ನೀತಿಯಿಂದ ಉಂಟಾಗುತ್ತಿರುವ ಹಾಗೂ ಮುಂದಿನ ವರ್ಷಗಳಲ್ಲಿ ಉಂಟಾಗುವ ಅಪಾಯದ ಬಗ್ಗೆ ಜನ ಜಾಗೃತಿ ಉಂಟು ಮಾಡಲು ಭಾರತೀಯ ಕಿಸಾನ್‌ ಸಂಘ ಸರಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದು ಭಾರತೀಯ ಕಿಸಾನ್‌ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಭಾಸ್ಕರ ರಾವ್‌ ತಿಳಿಸಿದ್ದಾರೆ.

ವಿಶ್ವ ವ್ಯಾಪಾರ ಸಂಘಟನೆಯ ಒಪ್ಪಂದಗಳಿಂದಾಗಿ ಈಗಾಗಲೇ 700ಕ್ಕೂ ಹೆಚ್ಚು ವಸ್ತುಗಳು ಯಾವ ಅಡ್ಡಿ ಆತಂಕಗಳಿಲ್ಲದೆ ಭಾರತಕ್ಕೆ ಆಮದಾಗುತ್ತಿವೆ. ಮುಂದಿನ ವರ್ಷದ ಏಪ್ರಿಲ್‌ ಹೊತ್ತಿಗೆ ಮತ್ತೂ ಕೆಲವು ಪದಾರ್ಥಗಳಿಗೆ ಅನುಮತಿ ದೊರಕಲಿದ್ದು, ರೈತರಿಗೆ ಇದರಿಂದ ಭಾರಿ ಅನ್ಯಾಯ ಆಗುತ್ತದೆ ಎಂದು ಅವರು ತಿಳಿಸಿದರು. ಭಾರತ ಈಗ ಜಾರಿಗೆ ತಂದಿರುವ ಆಮದು ನೀತಿಯನ್ನು ಕೈಬಿಡಬೇಕು ಎಂದಿರುವ ಅವರು, ಜನವರಿ 26ರಂದು ಬೃಹತ್‌ ಪ್ರತಿಭಟನೆ ನಡೆಸಲು ಸಂಘ ಉದ್ದೇಶಿಸಿದ್ದು, ಈ ಸಂಬಂಧ ರೈತರಲ್ಲಿ ಜಾಗೃತಿ ಮೂಡಿಸಲು ಪಾದಯಾತ್ರೆ ನಡೆಸುತ್ತಿರುವುದಾಗಿ ತಿಳಿಸಿದರು.

ಪೆಪ್ಸಿ, ಕೋಕಾಕೋಲಾ ಮುಂತಾದ ಹಲವು ಎಂ.ಎನ್‌.ಸಿ.ಗಳು ನಮ್ಮ ದೇಶದ ಸಾವಿರಾರು ಕೋಟಿ ರುಪಾಯಿಗಳನ್ನು ವಿದೇಶಕ್ಕೆ ಒಯ್ಯುತ್ತಿವೆ ನಮ್ಮ ದೇಶದ ಬೊಕ್ಕಸವನ್ನು ಬರಿದು ಮಾಡುತ್ತಿವೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಶಿವ, ಜಿಲ್ಲಾ ಶಾಖೆಯ ಅಧ್ಯಕ್ಷ ಜವರೇಗೌಡ, ಜಿಲ್ಲಾ ಸಮಿತಿಯ ಮಹಿಳಾ ಅಧ್ಯಕ್ಷೆ ಡಾ. ಹೇಮಾವತಿ ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+