ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರವಾರ ಬಂದರು ಮಂಡಳಿಗೆ ಕೋರ್ಟ್‌ ನೋಟೀಸು

By Staff
|
Google Oneindia Kannada News

ಬೆಂಗಳೂರು : ವಸತಿ ಪ್ರದೇಶಗಳಲ್ಲಿ , ಹಾನಿಕಾರಕ ಆ್ಯಸಿಡ್‌ ಮತ್ತು ಇತರ ರಾಸಾಯನಿಕಗಳ ಸಾಗಾಣಿಕೆ ಮತ್ತು ಸಂಗ್ರಹವನ್ನು ನಿಲ್ಲಿಸಬೇಕು ಎಂದು ಹೈಕೋರ್ಟ್‌ ಹಂಗಾಮಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಅಶೋಕ್‌ ಭಾನ್‌ ಮತ್ತು ನ್ಯಾಯ ಮೂರ್ತಿ ಆರ್‌. ಗುರುರಾಜನ್‌ ಸೋಮವಾರ ಕಾರವಾರ ಬಂದರು ಮಂಡಳಿಗೆ ನೋಟೀಸು ಜಾರಿ ಮಾಡಿದ್ದಾರೆ.

ಶ್ರೀ ಕಾಂತ್‌ ತಾಕು, ಹರಿಕಾಂತ್‌ ಮತ್ತು ಇತರ ಒಂಬತ್ತು ಮಂದಿ ಗ್ರಾಮಸ್ಥರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ , ಬಂದರು ಮಂಡಳಿ ಗ್ರಾಮದ ಹತ್ತಿರದ ವಿಶಾಲ ಪ್ರದೇಶದಲ್ಲಿ ಆ್ಯಸಿಡ್‌ ಮತ್ತು ರಸಾಯನಿಕಗ-ಳ-ನ್ನು ಸಂಗ್ರಹಿಸುತ್ತಿದೆ. ಈ ರೀತಿಯ ಸಂಗ್ರಹ ಕ್ಕೆ ಮತ್ತು ಖಾಸಗಿ ಸಂಸ್ಥೆಗಳಿಗೆ ಈ ರಾಸಾಯನಿಕಗಳನ್ನು ಸಾಗಿಸುವುದಕ್ಕೆ ಅನುಮತಿ ನೀಡುವುದರಿಂದ ಗ್ರಾಮಸ್ಥರ ಜೀವಕ್ಕೆ ಹಾನಿಯಾಗುವ ಸಂಭವ ಇರು-ವು-ದ-ರಿಂ-ದ ಆ್ಯಸಿಡ್‌ ಸಂಗ್ರಹ ಮತ್ತು ಸಾಗಾಣಿಕೆಯನ್ನು ಬಂದರು ಮಂಡಳಿ ನಿಲ್ಲಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X