ನೆಟ್ ಅಡಿಕ್ಷನ್ಗೆ ಸೂಪರ್ ರೇಡಿಯೋ ಔಷಧಿ
ಬೆಂಗಳೂರು : ನೆಟ್ಗೆ ಆಡಿಕ್ಟ್ ಆದ ಮಕ್ಕಳು ಯಾವ್ಯಾವುದೋ ಸೈಟಿನೊಳಗೆ ನುಗ್ಗುವ ಬಗ್ಗೆ ಆತಂಕಪಡುವ ತಂದೆ-ತಾಯಿಗಳಿಗೆ ಇಲ್ಲೊಂದು ಸಂತಸದ ಸುದ್ದಿ ಇದೆ.
ಈ ವರ್ಷದ ಕೊನೆಗೆ ಮಾಹಿತಿ ತಂತ್ರಜ್ಞಾನದ ರಾಜಧಾನಿ ಬೆಂಗಳೂರಿನಲ್ಲಿ ಪ್ರಾರಂಭವಾಗುವ ಈ ಸೂಪರ್ ರೇಡಿಯೋ ಕೇಂದ್ರವನ್ನು ಅಮೆರಿಕ ಮೂಲದ ವರ್ಲ್ಡ್ಸ್ಪೇಸ್ ಕಾರ್ಪೋರೇಷನ್ ಸ್ಥಾಪಿಸಲಿದೆ. ಡಿಜಿಟಲ್ ಅಡಾಪ್ಟರ್ ಸಹಾಯದಿಂದ ಕಂಪ್ಯೂಟರ್ಗೆ ಜೋಡಿಸಬಹುದಾದ ಈ ಡಿಜಿಟಲ್ ರೇಡಿಯೋ, ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ಸೈಟ್ಗಳಿಗೆ ಹೋಗುವುದನ್ನು ನಿಯಂತ್ರಸಲಿದೆ.
ಈ ಸೂಪರ್ ರೇಡಿಯೋದಲ್ಲಿ 24 ಭಾಷೆಗಳ ಬಹುಭಾಷಾ ಸಂಗೀತ , ಮನರಂಜನೆ, ಸುದ್ದಿ ಸೇರಿದಂತೆ ಇತರ ಪ್ರತ್ಯೇಕ ಆಡಿಯೋ ಚಾನೆಲ್ಗಳು ಸೇರಿವೆ. ಈ ಕೇಂದ್ರದಲ್ಲಿ ಶಿಕ್ಷಣ, ಮನರಂಜನೆ ಮತ್ತು ಇತರ ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮಕ್ಕಳಿಗೆ ಹೆಚ್ಚಿನ ತಿಳುವಳಿಕೆ ನೀಡಲು ಗಮನಹರಿಸಲಾಗುವುದಲ್ಲದೆ ಮಕ್ಕಳು, ವಿಷಯ ಹುಡುಕಿಕೊಂಡು(ಸರ್ಚ್) ತಮ್ಮ ಮೇಲೆ ಕೆಟ್ಟಪರಿಣಾಮ ಬೀರುವ ಸೈಟ್ಗಳಿಗೆ ಹೋಗುವುದನ್ನು ನಿಯಂತ್ರಿಸಲಾಗುವುದು. ಮಕ್ಕಳಿಗೆ ಅಗತ್ಯವಿರುವ ಯಾವುದೇ ಮಾಹಿತಿಯನ್ನು ಸೂಪರ್ ರೇಡಿಯೋ ಒದಗಿಸಲಿದೆ ಎಂದು ವರ್ಲ್ಡ್ಸ್ಪೇಸ್ ಕಾರ್ಪೋರೇಷನ್ನ ಉಪಾಧ್ಯಕ್ಷ ಎಂ. ಜಿ. ಚಂದ್ರಶೇಖರ್ ಹೇಳುತ್ತಾರೆ.
ಡೌನ್ಲೋಡ್ ಸುಲಭ ಮತ್ತು ಫಾಸ್ಟ್ : ಈ ಸೂಪರ್ ರೇಡಿಯೋ ಮೂಲಕ ಆಡಿಯೋ ಡೌನ್ಲೋಡ್ ಮಾಡುವುದು ಸುಲಭ ಮತ್ತು ಫಾಸ್ಟ್. ಪ್ರಸ್ತುತ ಭಾರತೀಯ ದೂರವಾಣಿಯ ಡೌನ್ಲೋಡ್ ಸಾಮರ್ಥ್ಯ 25 ಕಿಲೋ ಬೈಟ್ಸ್ . ಇದು ಸೂಪರ್ ರೇಡಿಯೋದಲ್ಲಿ 128ಕಿಲೋ ಬೈಟ್ಸ್ಗೇರಲಿದೆ. ಕೇಂದ್ರಕ್ಕೆ ಪ್ರತಿವರ್ಷ ಒಂದು ಲಕ್ಷ ಗ್ರಾಹಕರನ್ನು ಸೆಳೆದುಕೊಳ್ಳುವ ಗುರಿಯಿದೆ. ಬಹುಮಾಧ್ಯಮಗಳನ್ನೊಳಗೊಂಡ ಈ ಪ್ರಸಾರ ವ್ಯವಸ್ಥೆ ಆರಂಭಿಸಲು ಏಷ್ಯಾಗೆ ಕಾಲಿಟ್ಟಿರುವ ವರ್ಲ್ಡ್ಸ್ಪೇಸ್ ಕಾರ್ಪೋರೇಷನ್ ಆಫ್ರಿಕಾದಲ್ಲಿ ಈಗಾಗಲೇ ಇಂಥ ಕೇಂದ್ರ ಹೊಂದಿದೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
ಏಷ್ಯಾದಲ್ಲಿ, ಭಾರತ, ಚೀನಾ, ಇಂಡೋನೇಷ್ಯಾ, ಫಿಲಿಫೈನ್ಸ್ ಮತ್ತು ಥೈಲ್ಯಾಂಡ್ಗಳಲ್ಲಿ ಈ ಯೋಜನೆ ಆರಂಭವಾಗಲಿದ್ದು, ಇದಕ್ಕಾಗಿ ಬಿಬಿಸಿ, ಸಿಎನ್ಎನ್ ಮತ್ತು ಬ್ಲೂಂಬರ್ಗ್ ಸಂಸ್ಥೆಗಳೊಂದಿಗೆ ಒಪ್ಪಂದವಾಗಿದೆ. ಭಾರತದಲ್ಲಿ ಆಲ್ ಇಂಡಿಯಾ ರೇಡಿಯೋ, ರೇಡಿಯೋ ಮಿಡ್ ಡೇ, ಆರ್. ಎಂ. ರೇಡಿಯೋ ಮತ್ತು ದಕ್ಷಿಣ ಭಾರತೀಯ ಭಾಷೆಗಳಿಗೆ ಸಂಬಂಧಿಸಿದಂತೆ ಏಷ್ಯಾನೆಟ್ನೊಂದಿಗೆ ಹಾಗೂ ತಮಿಳಿನ ವಿಆರ್ಜಿ ಸ್ಪೇಸ್ರೇಡಿಯೋದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇಷ್ಟಲ್ಲದೆ ವರ್ಲ್ಡ್ಸ್ಪೇಸ್ ಕಾರ್ಪೋರೇಷನ್ ತನ್ನದೇ ಒಂದು ರೇಡಿಯೋ ಕೇಂದ್ರವನ್ನು ಭಾರತದಲ್ಲಿ ಸ್ಥಾಪಿಸುವ ಗುರಿ ಹೊಂದಿದೆ.
ಏಕಕಾಲ ಪ್ರಸಾರ : ಭಾರತ ಮತ್ತು ಆಫ್ರಿಕಾಗಳಿಗೆ ತರಂಗಗಳು ಏಕಕಾಲಕ್ಕೆ ಪ್ರಸಾರವಾಗುವುದರಿಂದ ಎರಡೂ ದೇಶಗಳಿಂದ ಒಂದೇ ಕಾಲದಲ್ಲಿ ಪ್ರಸಾರ ಕೇಳಬಹುದಾಗಿದೆ. ವಿಶ್ವಜಾಲದ ಸುದ್ದಿಯನ್ನು ಪಡೆಯಲು ಅನುಕೂಲವಾಗುವಂತೆ ಹಿಟಾಚಿ, ಜೆವಿಸಿ, ಪ್ಯಾನಾಸೋನಿಕ್ ಮತ್ತು ಸ್ಯಾನಿಯೋ ಕಂಪನಿಗಳು ವಿಶೇಷ ರೀತಿಯ ರಿಸೀವರ್ಗಳನ್ನು ತಯಾರಿಸಿವೆ. ಇದಕ್ಕಾಗಿ ಗ್ರಾಹಕರಿಗೆ ತಗಲುವ ವೆಚ್ಚ ಕೇಬಲ್ ಟೀವಿ ಸಂಪರ್ಕಕ್ಕೆ ನೀಡುವ ಶುಲ್ಕಕ್ಕಿಂತೂ ಕಡಿಮೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications