ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪುಸ್ತಕ ಖರೀದಿ ಪ್ರಾಧಿಕಾರ ರಚನೆಗೆ ಭೈರಪ್ಪ ಆಗ್ರಹ
ಹುಬ್ಬಳ್ಳಿ : ಪುಸ್ತಕ ಖರೀದಿಯಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಹತ್ತಿಕ್ಕಲು ಪುಸ್ತಕ ಖರೀದಿ ಪ್ರಾಧಿಕಾರ ರಚಿಸುವಂತೆ ಖ್ಯಾತ ಕಾದಂಬರಿಕಾರ ಹಾಗೂ ಲೇಖಕ ಎಸ್.ಎಲ್. ಭೈರಪ್ಪ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಡಾ. ಗಂಗೂಬಾಯಿ ಹಾನಗಲ್ ಅವರ ‘ನನ್ನ ಬದುಕಿನ ಹಾಡು ’ ಪುಸ್ತಕವೂ ಸೇರಿದಂತೆ ಹೇಸರಾಂತ ಲೇಖಕರ ಎಂಟು ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು, ಹಾಲಿ ಇರುವ ಪುಸ್ತಕ ಖರೀದಿ ಪದ್ಧತಿ ವ್ಯಾಪಕ ಭ್ರಷ್ಟಾಚಾರಕ್ಕೆ ಇಂಬು ನೀಡುತ್ತಿರುವುದರಿಂದ ಆ ಪದ್ಧತಿಯನ್ನು ರದ್ದು ಪಡಿಸುವಂತೆ ಆಗ್ರಹಿಸಿದ್ದಾರೆ.
ಪುಸ್ತಕಗಳ ಸಗಟು ಖರೀದಿ ಅಧಿಕಾರವನ್ನು ನೇರವಾಗಿ ಗ್ರಂಥಾಲಯಗಳಿಗೇ ನೀಡಬೇಕು ಎಂದೂ ಹೇಳಿದ ಅವರು, ಪುಸ್ತಕಗಳನ್ನು ಖರೀದಿಸಲು ಗ್ರಂಥಾಲಯಗಳಿಗೆ ನೇರವಾಗಿ ಹಣ ಬಿಡುಗಡೆ ಮಾಡುವಂತೆ ಸಹ ಒತ್ತಾಯಿಸಿದರು.
Comments
Story first published: Monday, September 18, 2000, 5:30 [IST]