ಕೃಪಾಂಕ : ಸೆ.15ರಂದು ರಾಮಕೃಷ್ಣ ಆಯೋಗದ ಅಂತಿಮ ವರದಿ ಸಲ್ಲಿಕೆ
ಬೆಂಗಳೂರು : ಗ್ರಾಮೀಣ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿಕೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ರಾಮಕೃಷ್ಣ ನೇತೃತ್ವದ ಆಯೋಗ ತನ್ನ ಅಂತಿಮ ವರದಿಯನ್ನು ಸೆಪ್ಟೆಂಬರ್ 15ರಂದು ಸರಕಾರಕ್ಕೆ ಸಲ್ಲಿಸಲಿದೆ.
ಇದರಿಂದಾಗಿ ವಿವಿಧ ಸರಕಾರಿ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಶೀಘ್ರ ಚಾಲನೆ ದೊರೆಯಲಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್, ಗ್ರಾಮೀಣ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವ ವಿರುದ್ಧ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಸರಕಾರ ನಿವೃತ್ತ ಹೈಕೋರ್ಟ್ ನ್ಯಾಯ ಮೂರ್ತಿ ರಾಮಕೃಷ್ಣ ಆಯೋಗವನ್ನು ನೇಮಿಸಿತ್ತು. ಶೈಕ್ಷಣಿಕವಾಗಿ ಹಿಂದುಳಿಯುವ ಗ್ರಾಮೀಣ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ಸರಕಾರ ಈ ಆಯೋಗವನ್ನು ನೇಮಿಸಿತ್ತು.
ಗ್ರಾಮೀ-ಣ ಪ್ರ-ದೇ-ಶ-ಗ-ಳ-ಲ್ಲಿ-ನ ಶೈಕ್ಷ-ಣಿ-ಕ ಅವ್ಯ-ವ-ಸ್ಥೆ-ಯ ಕುರಿತು ಅಧ್ಯಯನ ನಡೆಸಿದ ಆಯೋಗ ಸರಕಾರಕ್ಕೆ ಕೃಪಾಂಕವನ್ನು ಮುಂದುವರೆಸುವಂತೆ ಸಲಹೆ ನೀಡಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ 15ರಷ್ಟು ಕೃಪಾಂಕ ನೀಡುವ ಪದ್ಧತಿ , ಬಂಗಾರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದಾಗ ಜಾರಿಯಾಗಿತ್ತು. ಧಾರವಾಡದ ಬಸವರಾಜ ನಾಗೂರು ಅವರ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಸಿ. ಭರೂಕ ಅವರು ಗ್ರಾಮೀಣರಿಗೆ ಕೃಪಾಂಕ ನೀಡುವುದು ಸಂವಿಧಾನಬದ್ದವಲ್ಲ ಎಂದು ತೀರ್ಪು ನೀಡಿತ್ತು.
(ಇನ್ಫೋ ವಾರ್ತೆ)