ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌ ಬಿಡುಗಡೆಯಾಗಲೆಂದು ರಾಮನಿಗೆ ಬೆಳ್ಳಿ ರಥ ಹರಕೆ

By Staff
|
Google Oneindia Kannada News

ಧರ್ಮಸ್ಥಳ : ರಾಜಕುಮಾರ್‌ ಅವರ ಶೀಘ್ರ ಬಿಡುಗಡೆಯಾದಲ್ಲಿ ಶ್ರೀ ರಾಮ ಕ್ಷೇತ್ರಕ್ಕೆ ಬೆಳ್ಳಿ ರಥವನ್ನು ನೀಡುವುದಾಗಿ ಇಲ್ಲಿನ ಕನ್ಯಾಡಿ ನಿತ್ಯಾನಂದ ಗ್ರಾಮದ ಆತ್ಮಾನಂದ ಸರಸ್ವತಿ ಸ್ವಾಮೀಜಿ ಹರಕೆ ಹೊತ್ತಿದ್ದಾರೆ.

200 ಕೆ.ಜಿ . ತೂಕದ , 18 ಅಡಿ ಎತ್ತರದ ಬೆಳ್ಳಿ ರಥವನ್ನು ಭಕ್ತಾದಿಗಳ ನೆರವಿನೊಂದಿಗೆ ನಿರ್ಮಿಸಲಾಗುವುದು. ರಾಜ್‌ ಕುಮಾರ್‌ ಅವರ ಬಿಡುಗಡೆಯಾದ ತಕ್ಷಣ ರಥವನ್ನು ರಾಮಕ್ಷೇತ್ರಕ್ಕೆ ಅರ್ಪಿಸಲಾಗವುದು ಎಂದು ಸ್ವಾಮೀಜಿ ಬುಧವಾರ ಸುದ್ದಿಗಾರರಿಗೆ ಹೇಳಿದ್ದಾರೆ.

ರಥ ನಿರ್ಮಾಣ ಕಾರ್ಯದ ಅಭಿಯಾನ ಮಂಗಳೂರಿನಿಂದ ಆರಂಭವಾಗುವುದು. ಡಾ. ರಾಜ್‌ ಕುಮಾರ್‌ ಮತ್ತು ಪಾರ್ವತಮ್ಮ ಅವರೇ ಸ್ವತಃ ಈ ರಥವನ್ನು ದೇವರಿಗೆ ಅರ್ಪಿಸುತ್ತಾರೆ ಎಂದು ಹೇಳುತ್ತಾ ಸ್ವಾಮೀಜಿ , ರಾಮ ಕ್ಷೇತ್ರದ ನಿರ್ಮಾಣ ಕಾರ್ಯಕ್ಕಾಗಿ ರಾಜ್‌ ಅವರು ಸಾಕಷ್ಟು ಸಹಾಯ ಮಾಡಿದ್ದಾರೆ. ಮಂದಿರ ನಿರ್ಮಾಣಕ್ಕಾಗಿ ಐದು ಸಂಗೀತ ಕಚೇರಿಗಳನ್ನು ಏರ್ಪಡಿಸಿದಾಗ ರಾಜ್‌ ಅವರು ಯಾವ ಸಂಭಾವನೆಯನ್ನೂ ಪಡೆಯದೇ ಕಚೇರಿಯಲ್ಲಿ ಹಾಡಿದ್ದರು ಎಂದು ರಾಜ್‌ ಕೊಡುಗೆಯನ್ನು ಸ್ಮರಿಸಿಕೊಂಡರು.

(-ಮಂ-ಗ-ಳೂ-ರು -ಪ್ರ-ತಿ-ನಿ-ಧಿ-ಯಿಂ-ದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X