ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈ. ಕರ್ನಾಟಕ ವಿಮೋಚನಾ ದಿನ ಆಚರಿಸಲು ಸರ್ಕಾರದ ಒಪ್ಪಿಗೆ

By Staff
|
Google Oneindia Kannada News

ಬೆಂಗಳೂರು : ಸರ್ಕಾರಿ ಖರ್ಚಿನಲ್ಲೇ ಪ್ರತಿವರ್ಷ ಹೈದರಾಬಾದ್‌ ಕರ್ನಾಟಕ- ಪ್ರದೇಶದ ವಿಮೋಚನಾ ದಿನವನ್ನು ಆ-ಚ-ರಿ-ಸ-ಲು ರಾಜ್ಯ ಸರಕಾರ ಒಪ್ಪಿದೆ ಎಂದು ಹೈ.ಕ. ಪ್ರದೇಶ ವಿಮೋಚನಾ ದಿನಾಚರಣೆ ಸಮಿತಿ ಮಂಗಳವಾರ ತಿಳಿಸಿದೆ.

ಈ ಸಂಬಂಧ ನಿಯೋಗ ಮುಖ್ಯಮಂತ್ರಿ ಕೃಷ್ಣ ಅವರನ್ನು ಸೋಮವಾರ ಭೇಟಿಯಾಗಿ, ಬೀದರ್‌, ಗುಲ್ಬರ್ಗಾ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ದಿನಾಚರಣೆ ಆಚರಿಸಲು ಆದೇಶ ಹೊರಡಿಸಲು ಮನವಿ ಮಾಡಿತ್ತು. ಮನವಿ ಪುರಸ್ಕರಿಸಿರುವ ಕೃಷ್ಣ ಅವರು ದಿನಾಚರಣೆಗೆ 2 ಲಕ್ಷ ರುಪಾಯಿಗಳನ್ನೂ ಮಂಜೂರು ಮಾಡುವುದಾಗಿ ತಿಳಿಸಿದರೆಂದು ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ವಿಧಾನಪರಿಷತ್‌ ಸದಸ್ಯ ಶಶೀಲ್‌ ನಮೋಷಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಾಥಮಿಕ ಹಾಗೂ ಪ್ರೌಢಶಾಲೆ ಪಠ್ಯಪುಸ್ತಕಗಳಲ್ಲಿ ಹೈದರಾಬಾದ್‌ ಕರ್ನಾಟಕ-ದ ಪ್ರದೇಶದ ವಿಮೋಚನಾ ಇತಿಹಾಸವನ್ನು ಸೇರಿಸಬೇಕೆಂಬ ಬೇಡಿಕೆಯನ್ನು ಸರಕಾರ ಪರಿಶೀಲಿಸುವುದಾಗಿ ಭರವಸೆ ಸಿಕ್ಕಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾತಂತ್ರ ಹೋರಾಟಗಾರ ಮಾಣಿಕಪ್ಪ ಪಾಟೀಲ್‌, ಸಮಿತಿಯ ಖಜಾಂಚಿ ಅಮರನಾಥ ಪಾಟೀಲ್‌ ಮೊದಲಾದ ಗಣ್ಯರು ಹಾಜರಿದ್ದರು.

  • ಮುಖಪುಟ / ಇವತ್ತು... ಈ ಹೊತ್ತು...
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X