ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೊದ-ಲು ರಸ್ತೆ , ಆ-ಮೇ-ಲೆ -ವಿ-ಮಾ-ನ ನಿಲ್ದಾ-ಣ
ಮಂಗಳೂರು : ಕರಂಬಾರು ಮತ್ತು ಕೆಂಜಾರು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿ ಪರ್ಯಾಯ ರಸ್ತೆ ನಿರ್ಮಿಸಿದ ನಂತರವೇ ಬಜ್ಪೆ ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ರನ್ವೇ ಕಾಮಗಾರಿ ಆರಂಭಿಸಬೇಕು ಎಂದು ಮರವೂರು, ಕರಂಬಾರು ಮತ್ತು ಕೆಂಜಾರು ಗ್ರಾಮಸ್ಥರು ವಿಮಾನ ನಿಲ್ದಾಣ ಪ್ರಾಧಿಕಾರವನ್ನು ಆಗ್ರಹಿಸಿದ್ದಾರೆ.
ರನ್ವೇ ನಿರ್ಮಾಣ ಕಾರ್ಯ ಆರಂಭಿಸಿ, ರಸ್ತೆ ನಿಲುಗಡೆ ಮಾಡಿದಲ್ಲಿ ಮಂಗಳೂರು ಬೆಳ್ಮಣ್ಣು ರಾಜ್ಯ ರಸ್ತೆ ಯ ಬಹುತೇಕ ಮಾರ್ಗಗಳಲ್ಲಿ ಸಂಚಾರ ಸ್ಥಗಿತವಾಗಿ ಗ್ರಾಮಸ್ಥರಿಗೆ ತೊಂದರೆಯಾಗಲಿದೆ. ಮೂರು ಜಿಲ್ಲಾ ಪಂಚಾಯತ್ ರಸ್ತೆಗಳ ಸಂಪರ್ಕ ಕಡಿದು ಹೊಗುವುದರಿಂದ ಮೊದಲು ಸಮರ್ಪಕ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಿ, ನಂತರ ವಿಮಾನ ನಿಲ್ದಾಣದ ರನ್ವೇ ಕಾಮಗಾರಿಯನ್ನು ಆರಂಭಿಸುವಂತೆ ಗ್ರಾಮಸ್ಥರು ಪ್ರಾಧಿಕಾರವನ್ನು ಆಗ್ರಹಿಸಿದ್ದಾರೆ.
Story first published: Tuesday, September 5, 2000, 5:30 [IST]