-ದಾ-ವ-ಣ-ಗೆ-ರೆ ಬಳಿ ರೈಲಿ-ಗೆ ಸಿಕ್ಕಿ ನಾಲ್ವರು ಯುವ-ಕ-ರ ಸಾವು
ದಾವಣಗೆರೆ : ಇಲ್ಲಿನ ದೊಡ್ಡ ಬಾತಿ-ದೊಗ್ಗಳ್ಳಿ ರೈಲ್ವೇ ಲೆವಲಿಂಗ್ ಕ್ರಾಸ್ನ ಯಾಂತ್ರಿಕ ಗೇಟ್ ಬಳಿ ಚಲಿಸುವ ರೈಲಿನಡಿ ಸಿಕ್ಕಿ ನಾಲ್ವರು ಯುವಕರು ಮೃತರಾಗಿದ್ದಾರೆ.
20 ವರ್ಷ ವಯಸ್ಸಿನ ಇಬ್ಬರು, 25 ಮತ್ತು 30 ವರ್ಷ ವಯಸ್ಸಿನ ಇಬ್ಬರು ಯುವಕರ ರಕ್ತ ಸಿಕ್ತ ಶವಗಳು ರೈಲ್ವೇ ಟ್ರಾಕ್ನಿಂದ ಹದಿನೈದು ಅಡಿ ದೂರದಲ್ಲಿ ಕಂಡು ಬಂದಿದ್ದು , ರೈಲು ಓಡುವ ರಭಸಕ್ಕೆ ಶವಗಳು ದೂರಕ್ಕೆ ಚಿಮ್ಮಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತ ಪಟ್ಟವರನ್ನು ಗುರುತಿಸುವುದು ಸಾಧ್ಯವಾಗಿಲ್ಲ. ತಲೆಯ ಮೇಲೆ ರೈಲು ಹರಿದಿರುವುದರಿಂದ ಅವರ ಗುರುತು ಹಿಡಿಯುವುದು ಕಷ್ಟವಾಗಿದೆ.
ಈ ಸಾವಿಗೆ ಕಾರಣವಾದ ರೈಲು ಯಾವುದು ಎನ್ನುವುದೂ -ತಿ-ಳಿ-ದು ಬಂದಿಲ್ಲ. ನಾಲ್ಕು ಮಂದಿ ಯುವಕರು ಒಂದೇ ಬಾರಿಗೆ ಸಾವಿಗೀಡಾಗಿರುವುದರಿಂದ ಇದು ಆತ್ಮ ಹತ್ಯೆಯೋ, ಕೊಲೆಯೋ ಅಥವಾ ಅಕಸ್ಮಿಕ ಅಪಘಾತವೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಒಬ್ಬನ ಅಂಗಿಯ ಮೇಲೆ ದಾವಣಗೆರೆ ಟೈಲರ್ ಅಂಗಡಿಯ ಹೆಸರಿದ್ದು, ಇದರ ಆಧಾರದಲ್ಲಿ ಮೃತರ ಗುರುತು ಹಚ್ಚುವ ಪ್ರಯತ್ನ ನಡೆಯುತ್ತಿದೆ. ಶವಗಳನ್ನು ದಾವಣಗೆರೆಯ ಸಿ.ಜಿ. ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
(ಇನ್ಫೋ- ವಾ-ರ್ತೆ)