ಓಣಂ ಪ್ರಯು-ಕ್ತ ದಕ್ಷಿ-ಣ ರೈಲ್ವೆ ಯಿಂ-ದ ವಿ-ಶೇ-ಷ ರೈಲು-ಗ-ಳ- ಓಡಾ-ಟ
ತಿರುವನಂತಪುರಂ : ದಕ್ಷಿಣ ರೈಲ್ವೆಯು ಓಣಂ ಪ್ರಯುಕ್ತ ಚೆನ್ನೈ-ಮಂಗಳೂರು ಮತ್ತು ಬೆಂಗಳೂರು-ಕೊಳ್ಳಂ ನಡುವೆ ವಿಶೇಷ ರೈಲು ವ್ಯವಸ್ಥೆಯನ್ನು ಒದಗಿಸಲಿದೆ ಎಂದು ರೈಲ್ವೇ ಪ್ರಕಟಣೆ ತಿಳಿಸಿದೆ.
ಚೆನ್ನೈ ಸೆಂಟ್ರಲ್- ತಿರುವನಂತ ಪುರ ವಿಶೇಷ ರೈಲು ಸೆಪ್ಟೆಂಬರ್ 7,8,ಮತ್ತು 15ರಂದು ಓಡಲಿದ್ದು, ರಾತ್ರಿ 10.45ಕ್ಕೆ ಚೆನ್ನೈಯಿಂದ ಹೊರಟು ಮರುದಿನ ಮಧ್ಯಾಹ್ನ 1.45ಕ್ಕೆ ತಿರುವನಂತಪುರಂ ತಲುಪಲಿದೆ. ತಿರುವನಂತಪುರಂ ಸೆಂಟ್ರಲ್-ಚೆನ್ನೈ ಸೆಂಟ್ರಲ್ ವಿಶೇಷ ರೈಲು ಸೆಪ್ಟೆಂಬರ್ 11,12 ಮತ್ತು 17ರಂದು ಓಡಲಿದ್ದು, ತಿರುವನಂತಪುರದಿಂದ ಮಧ್ಯಾಹ್ನ 3.00ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 09.45ಕ್ಕೆ ಚೆನ್ನೈ ತಲುಪಲಿದೆ.
ತಿರುವನಂತಪುರ ಸೆಂಟ್ರಲ್- ಮಂಗಳೂರು ವಿಶೇಷ ರೈಲು ಸೆಪ್ಟೆಂಬರ್ 8 ಮತ್ತು 9ರಂದು ರಾತ್ರಿ 10.30ಕ್ಕೆ ತಿರುವನಂತಪುರಂನಿಂದ ಹೊರಟು ಮರುದಿನ ಬೆಳಿಗ್ಗೆ 11.00 ಗಂಟೆಗೆ ಮಂಗಳೂರು ತಲುಪಲಿದೆ. ಮಂಗಳೂರು ತಿರುವನಂತಪುರ ನಡುವೆ ಓಡಲಿರುವ ಇನ್ನೊಂದು ರೈಲು, ಸೆಪ್ಟೆಂಬರ್ 10 ಮತ್ತು 11ರಂದು ರಾತ್ರಿ 7.00ಕ್ಕೆ ಮಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 09.55 ಕ್ಕೆ ತಿರುವನಂತಪುರಂ ಸೇರಲಿದೆ.
ಬೆಂಗಳೂರು- ಕೊಳ್ಳಂ ವಿಶೇಷ ರೈಲು ಸೆಪ್ಟೆಂಬರ್ 7 ಮತ್ತು 10ರಂದು ರಾತ್ರಿ 9.50ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಮಧ್ಯಾಹ್ನ 2.30ಕ್ಕೆ ಕೊಳ್ಳಂ ತಲುಪಲಿದೆ. ಕಿಲೋನ್- ಬೆಂಗಳೂರು ವಿಶೇಷ ರೈಲು ಸೆಪ್ಟೆಂಬರ್ 8 ಮತ್ತು 11 ರಂದು ಸಂಜೆ 6.45ಕ್ಕೆ ಕಿಲೋನ್ನಿಂದ ಹೊರಟು ಮದಿನ ಬೆಳಿಗ್ಗೆ 10.45ಕ್ಕೆ ಬೆಂಗಳೂರು ತಲುಪಲಿದೆ.
(ಯುಎ-ನ್-ಐ)